ಸರ್ಕಾರಿ ಶಾಲೆ ನೆಲಸಮ, ಇ.ಕೃಷ್ಣಪ್ಪ ಅವರ ವಿರುದ್ಧ ಚಾರ್ಜ್ ಶೀಟ್
ಬೆಂಗಳೂರು, ಜುಲೈ 02 : ನಿರ್ಮಾಪಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸರ್ಕಾರಿ ಶಾಲೆ ನೆಲಸಮಗೊಳಿಸಿ, ಆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಅವರ ಮೇಲಿದೆ.
2014ರ
ಆಗಸ್ಟ್
14ರಂದು
ಎಂ.ಭಾಸ್ಕರ್
ಅವರು
ಲೋಕಾಯುಕ್ತರಿಗೆ
ನೀಡಿದ
ದೂರಿನ
ಅನ್ವಯ
ತನಿಖೆ
ನಡೆಸಿ,
ಶುಕ್ರವಾರ
ಚಾರ್ಜ್
ಶೀಟ್
ಸಲ್ಲಿಸಲಾಗಿದೆ.
ಭ್ರಷ್ಟಾಚಾರ
ಪ್ರತಿಬಂಧನ
ಕಾಯ್ದೆ
ಪ್ರಕಾರ
ಆರೋಪ
ಪಟ್ಟಿ
ಸಲ್ಲಿಸಲಾಗಿದೆ.
[ಗಣೇಶ್
'ಮುಂಗಾರು
ಮಳೆ-2'ಗೆ
ಅದ್ದೂರಿ
ಮುಹೂರ್ತ]
ಏನಿದು ಪ್ರಕರಣ? : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಕಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 16/2ರಲ್ಲಿ ಪ್ರಾಥಮಿಕ ಶಾಲೆ ಕಟ್ಟಡದ ಪಕ್ಕದಲ್ಲಿಯೇ ಕೃಷ್ಣಪ್ಪ ಅವರ ಮನೆ ಇದೆ. ಕೃಷ್ಣಪ್ಪ ಅವರು 2012ರಲ್ಲಿ ಶಾಲೆಯನ್ನು ನೆಲಸಮಗೊಳಿಸಿ, ಆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಪೌಂಡ್ ನಿರ್ಮಿಸಿಕೊಂಡಿದ್ದಾರೆ ಎಂಬುದು ಆರೋಪ. [ಸರ್ಕಾರಕ್ಕೆ ಮುಖಭಂಗ, ಲೋಕಾಯುಕ್ತ ನೇಮಕ ಕಡತ ವಾಪಸ್]
ಎಂ.ಭಾಸ್ಕರ್ ಅವರು ಈ ಕುರಿತು ಲೋಕಾಯಕ್ತರಿಗೆ ದೂರು ನೀಡಿದ್ದರು. ಸರ್ಕಾರದ ಆಸ್ತಿ ಕಬಳಿಕೆ ಆಗಿದ್ದರೂ ಕೃಷ್ಣಪ್ಪ ಅವರ ಪ್ರಭಾವದಿಂದಾಗಿ ಯಾವ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.['ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ']
ತನಿಖೆ ನಡೆಸಿದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕೃಷ್ಣಪ್ಪ ಅವರ ಜೊತೆಗೆ ಹಿಂದೆ ಅಲ್ಲಿ ಕೆಲಸ ಮಾಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹಮೂರ್ತಿ ಅವರ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.