ಹೆಬ್ಬಾಳ ಉಪ ಚುನಾವಣೆ : ಕಾಂಗ್ರೆಸ್ನಲ್ಲಿ ಟಿಕೆಟ್ಗೆ ಪೈಪೋಟಿ
ಬೆಂಗಳೂರು, ಡಿಸೆಂಬರ್ 11 : ವಿಧಾನಪರಿಷತ್ ಚುನಾವಣೆಯ ಟಿಕೆಟ್ ಹಂಚಿಕೆ ಅಸಮಾಧಾನವನ್ನು ಶಮನಗೊಳಿಸಲು ಕಾಂಗ್ರೆಸ್ ಪ್ರಯತ್ನ ನಡೆಸುತ್ತಿದೆ. ಇದರ ನಡುವೆಯೇ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಟಿಕೆಟ್ಗಾಗಿ ಪಕ್ಷದಲ್ಲಿ ಪೈಪೋಟಿ ಆರಂಭವಾಗಿದೆ.
2016ರ
ಜನವರಿಯಲ್ಲಿ
ಹೆಬ್ಬಾಳ,
ದೇವದುರ್ಗ
ಮತ್ತು
ಬೀದರ್
ವಿಧಾನಸಭಾ
ಕ್ಷೇತ್ರಗಳ
ಉಪ
ಚುನಾವಣೆ
ನಡೆಯುವ
ಸಾಧ್ಯತೆ
ಇದೆ.
2013ರ
ಚುನಾವಣೆಯಲ್ಲಿ
ಹೆಬ್ಬಾಳದಿಂದ
ಶಾಸಕರಾಗಿ
ಆಯ್ಕೆಯಾಗಿದ್ದ
ಬಿಜೆಪಿಯ
ಜಗದೀಶ್
ಕುಮಾರ್
ನಿಧನದಿಂದಾಗಿ
ಉಪ
ಚುನಾವಣೆ
ಎದುರಾಗಿದೆ.
ಗುರುಪಾದಪ್ಪ
ನಾಗಮಾರಪಲ್ಲಿ
ನಿಧನದಿಂದಾಗಿ
ಬೀದರ್
ಮತ್ತು
ವೆಂಕಟೇಶ
ನಾಯಕ್
ಅವರ
ನಿಧನದಿಂದಾಗಿ
ದೇವದುರ್ಗ
ಕ್ಷೇತ್ರಕ್ಕೂ
ಉಪ
ಚುನಾವಣೆ
ನಡೆಯಬೇಕಿದೆ.
[ಹೆಬ್ಬಾಳ
ಶಾಸಕ
ಜಗದೀಶ್
ಕುಮಾರ್
ವಿಧಿವಶ]
ಮೂರು ಕ್ಷೇತ್ರಗಳ ಪೈಕಿ ಹೆಬ್ಬಾಳದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಯಲು ಪೈಪೋಟಿ ನಡೆಯುತ್ತಿದೆ. ವಿಧಾನಪರಿಷತ್ ಸದಸ್ಯ ಬೈರತಿ ಸುರೇಶ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಕೆ.ಆರ್.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರ ಸಂಬಂಧಿಕರಾದ ಬೈರತಿ ಸುರೇಶ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಟ್ಟದಲ್ಲಿ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದಾರೆ. [2013ರ ಚುನಾವಣೆ ಸೋತವರು, ಗೆದ್ದವರು]
ಜಾಫರ್ ಷರೀಫ್ ಬ್ಯಾಟಿಂಗ್ : ಹೆಬ್ಬಾಳ ಕ್ಷೇತ್ರದಲ್ಲಿ ಮೊಮ್ಮಗನಿಗೆ ಟಿಕೆಟ್ ಕೊಡಿಸಲು ಹಿರಿಯ ನಾಯಕ ಜಾಫರ್ ಷರೀಫ್ ಪ್ರಯತ್ನ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ರೆಹಮಾನ್ ಷರೀಫ್ಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆಸಿದ್ದಾರೆ. [ಶಾಸಕರು ವಿಧಿವಶ : ಎದುರಾಯ್ತು ಉಪ ಚುನಾವಣೆ]
2013ರ ಚುನಾವಣೆಯಲ್ಲಿ ರೆಹಮಾನ್ ಷರೀಫ್ ಹೆಬ್ಬಾಳ ಕ್ಷೇತ್ರದಲ್ಲಿ ಜಗದೀಶ್ ಕುಮಾರ್ ಅವರ ವಿರುದ್ಧ ಸ್ಪರ್ಧಿಸಿದ್ದರು. 33,026 ಮತಗಳನ್ನು ಪಡೆದು ಸೋಲು ಅನುಭವಿಸಿದ್ದರು. ಈ ಬಾರಿಯು ಟಿಕೆಟ್ ನೀಡಿ ಎಂಬುದು ಜಾಫರ್ ಷರೀಫ್ ಅವರ ಬೇಡಿಕೆ. ಯುವ ಕಾಂಗ್ರೆಸ್ ಅಧ್ಯಕ್ಷ ರಿಜ್ವಾನ್ ಅರ್ಷದ್ ಅವರ ಹೆಸರು ಕ್ಷೇತ್ರದಲ್ಲಿ ಕೇಳಿಬರುತ್ತಿದೆ.
ಬಿಜೆಪಿ ಮತ್ತು ಜೆಡಿಎಸ್ ಉಪ ಚುನಾವಣೆ ಅಭ್ಯರ್ಥಿಗಳ ಬಗ್ಗೆ ಚಿಂತನೆ ನಡೆಸಿಲ್ಲ. ಡಿಸೆಂಬರ್ 27ರಂದು ನಡೆಯುವ ವಿಧಾನಪರಿಷತ್ ಚುನಾವಣೆ ಮೇಲೆ ಗಮನವಿಟ್ಟಿವೆ. ಬಿಜೆಪಿ ಬೀದರ್ ಕ್ಷೇತ್ರದಲ್ಲಿ ಗುರುಪಾದಪ್ಪ ನಾಗಮಾರಪಲ್ಲಿ ಪುತ್ರ ಸೂರ್ಯಕಾಂತ ನಾಗಮಾರಪಲ್ಲಿಗೆ ಟಿಕೆಟ್ ನೀಡಲಿದೆ ಎಂಬುದು ಪಕ್ಷದ ಮೂಲಗಳ ಮಾಹಿತಿ.