ಒಂಟಿ ಮಹಿಳೆಯರನ್ನು ಹುಡುಕಿ ಕೊಲ್ಲುತ್ತಿದ್ದ ಸರಣಿ ಹಂತಕಿಗೆ ಜೀವಾವಧಿ
ಬೆಂಗಳೂರು, ಅಕ್ಟೋಬರ್ 5: ಶಿವಮೊಗ್ಗ ಮೂಲದ ಸರಣಿ ಹಂತಕಿ ಪ್ರೇಮಾ ಅಲಿಯಾಸ್ ಶಾಂತಾ ಜತೆಗೆ ಆಕೆಯ ಸಹಚರರಿಗೆ 64ನೇ ಸೆಷನ್ಸ್ ಕೋರ್ಟ್ ಜೀವಾವಧಿ ಜೈಲು ಶಿಕ್ಷೆ ಮತ್ತು 15 ಸಾವಿರ ರೂ ದಂಡ ವಿಧಿಸಿದೆ.
ಬೂಕನಕೆರೆಯಲ್ಲಿ ವರದಕ್ಷಿಣೆಗಾಗಿ ಪತಿ, ಅತ್ತೆ-ಮಾವ, ನಾದಿನಿಯಿಂದ ಗೃಹಿಣಿಯ ಹತ್ಯೆ
2010ರ ಮೇ 23ರಂದು ಮರಿಯಣ್ಣನಪಾಳ್ಯ ಸೇಂಟ್ ಪೀಟರ್ ರಸ್ತೆಯಲ್ಲಿ ನಡೆದಿದ್ದ ನಂಜಮ್ಮ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೃತಹಳ್ಳಿ ಪೊಲೀಸರು ಆರೋಪಿಗಳಾದ ಪ್ರೇಮಾ, ರಾಘವೇಂದ್ರ ಮತ್ತು ಸುರೇಂದ್ರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೇಮಾ ಮತ್ತು ರಾಘವೇಂದ್ರಗೆ ಜೀವಾವಧಿ ಶಿಕ್ಷ ವಿಧಿಸಿ ಸುರೇಂದ್ರನನ್ನು ಬಿಡುಗಡೆ ಮಾಡಿದ್ದಾರೆ.
ಪತ್ನಿ ಕೊಂದ ಆರೋಪದಿಂದ ಬಹುಬೇಡಿಕೆ ನಿರೂಪಕನಿಗೆ ಖುಲಾಸೆ
ಶಿವಮೊಗ್ಗ ಮೂಲದ ನಂಜಮ್ಮ, ಪತಿ ಮತ್ತು ಮಕ್ಕಳನ್ನು ತೊರೆದು ಬೆಂಗಳೂರಿಗೆ ಬಂದು ಅಮೃತಹಳ್ಳಿಯಲ್ಲಿ ವಾಸವಿದ್ದರು. ಈ ವೇಳೆ ಪ್ರೇಮಾ ಮತ್ತು ರಾಘವೇಂದ್ರ ಪರಿಚಯವಾಗಿದ್ದರು.
ರಾತ್ರಿ ನಂಜಮ್ಮ ಕೆಲಸದಿಂದ ಬಂದಾಗ ನಂಜಮ್ಮನಿಗೆ ಮದ್ಯದಲ್ಲಿ ಮತ್ತು ಬರುವ ಔಷಧ ಕುಡಿಸಿ ಆಕೆಯ ಕತ್ತು ಸೀಳಿ ಫ್ಯಾನಿಗೆ ನೇಣುಹಾಕಿದ್ದರು. ಆಕೆಯ ಬಳಿ ಇದ್ದ ಕಾಲುಂಗುರ ಹಾಗೂ ರೋಲ್ಡ್ ಗೋಲ್ಡ್ ಚೈನ್ ಕದ್ದಿದ್ದರು.ತನಿಖೆ ವೇಳೆ ನಂಜಮ್ಮ ಸೇರಿ 11 ಕೊಲೆ ಪ್ರಕರಣಗಳು ಬೆಳಕಿಗೆ ಬಂದಿವೆ.