ತಾವರೆಕೆರೆಯಲ್ಲಿ ಬೋನಿಗೆ ಬಿದ್ದ ಚಿರತೆ: ಸ್ಥಳೀಯರು ಕೊಂಚ ನಿರಾಳ
ಬೆಂಗಳೂರು, ಏಪ್ರಿಲ್ 04: ಬೆಂಗಳೂರು, ತುಮಕೂರಿನಲ್ಲಿ ಚಿರತೆಯ ಹಾವಳಿ ಹೆಚ್ಚಾಗಿದೆ. ತಾವರೆಕೆರೆಯ ಹಾಳುಬಾಇ ಪಾಳ್ಯದಲ್ಲಿ ಎರಡೂವರೆ ವರ್ಷದ ಚಿರತೆಯನ್ನು ಬುಧವಾರ ಸೆರೆ ಹಿಡಿಯಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
ಗುಲಗಂಜನಹಳ್ಳಿ ಹಾಳುಬಾವಿಪಾಳ್ಯ ಸುತ್ತಮುತ್ತ ಇತ್ತೀಚೆಗೆ ಚಿರತೆಗಳ ಹಾವಳಿ ಹೆಚ್ಚಾಗಿತ್ತು. ದನಕರುಗಳು, ಕುರಿ ಹಾಗೂ ಸ್ಥಳೀಯರ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಗುಡ್ಡದ ಸಮೀಪವಿರುವ ಹೊಲಗಳಿಗೆ ಹೋಗಲು ರೈತರು ಭಯ ಪಡುತ್ತಿದ್ದರು.
ತುಮಕೂರು: ಮನೆಗೆ ನುಗ್ಗಿದ ಚಿರತೆ: ಶೌಚಾಲಯದಲ್ಲಿ ರಕ್ಷಣೆ ಪಡೆದ ಮಹಿಳೆಯರು
ಈ ಕುರಿತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದ ಮೇರೆಗೆ ಹಲವೆಡೆ ಚಿರತೆ ಹಿಡಿಯಲು ಬೋನುಗಳನ್ನು ಅಳವಡಿಸಲಾಗಿತ್ತು.
ಸದ್ಯ ಚಿರತೆ ಬೋನಿಗೆ ಬಿದ್ದಿದ್ದು, ಕಗ್ಗಲೀಪುರದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಚಿರತೆ ಜತೆಗೆ ಇನ್ನು ಹಲವು ಚಿರತೆಗಳು ಬಂದಿರುವ ಶಂಕೆ ವ್ಯಕ್ತವಾಗಿದ್ದು ಅದರ ಕುರಿತು ಪರಿಶೀಲನೆ ನಡೆಯುತ್ತಿದೆ. ಸ್ಥಳೀಯರು ಸದ್ಯಕ್ಕೆ ನಿರಾಳರಾಗಿದ್ದಾರೆ.