ಕೆರೆ ಒತ್ತುವರಿ ಸಂತ್ರಸ್ತರಿಗೆ ಸಿದ್ಧವಾಗಿದೆ 400 ಮನೆಗಳು
ಬೆಂಗಳೂರು, ಮೇ 29 : ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ಮನೆ ಕಳೆದುಕೊಂಡವರಿಗೆ ಹಸ್ತಾಂತರ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 400 ಮನೆಗಳನ್ನು ಮೀಸಲಾಗಿಟ್ಟಿದೆ. ಸರ್ಕಾರದ ಸೂಚನೆ ಅನ್ವಯ ತುಮಕೂರು ರಸ್ತೆಯಲ್ಲಿ ಮನೆಗಳನ್ನು ನೀಡಲಾಗುತ್ತದೆ.
ಮುಖ್ಯಮಂತ್ರಿ
ಸಿದ್ದರಾಮಯ್ಯ
ಅವರು
ತೆರವು
ಕಾರ್ಯಾಚರಣೆಯಿಂದ
ಮನೆ
ಕಳೆದುಕೊಂಡ
ಬಡವರಿಗೆ
ಬಿಡಿಎ
ವತಿಯಿಂದ
ಉಚಿತವಾಗಿ
ಮನೆ
ನೀಡುವುದಾಗಿ
ಕೆಲವು
ದಿನಗಳ
ಹಿಂದೆ
ಘೋಷಣೆ
ಮಾಡಿದ್ದರು.
ತುಮಕೂರು
ರಸ್ತೆಯ
ಆಲೂರು
ಬಳಿ
ಮನೆಗಳ
ನಿರ್ಮಾಣ
ಪೂರ್ಣಗೊಂಡಿದ್ದು,
ಇದನ್ನು
ಸಂತ್ರಸ್ತರಿಗೆ
ಹಂಚಿಕೆ
ಮಾಡಲಾಗುತ್ತದೆ.
[ಕೆರೆಗಳು
ನಕ್ಷೆಯಲ್ಲಿ
ಮಾತ್ರ
ಇವೆ!]
ಬಿಡಿಎ ಇಂಜಿನಿಯರ್ ಎಸ್.ಎನ್.ನಾಯಕ್ ಈ ಕುರಿತು ಮಾಹಿತಿ ನೀಡಿದ್ದಾರೆ. ಸರ್ಕಾರಕ್ಕೆ ಗೋಲ್ಡನ್ ಪಾಮ್ ರೆಸಾರ್ಟ್ ಬಳಿಯ ಆಲೂರಿನಲ್ಲಿ 400 ಮನೆಗಳ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಬಿಡಿಎ ಮಾಹಿತಿ ನೀಡಿದೆ, ಮುಂದಿನ ಕ್ರಮವನ್ನು ಅವರು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. [ಇಂದು ಬೆಂಗಳೂರು ಕೆರೆಗಳ ಕಥೆ-ವ್ಯಥೆ]
ಮನೆಗಳನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದಕ್ಕೆ ಪ್ರತಿಯಾಗಿ ಬಿಡಿಎಗೆ ಭೂಮಿ ಸಿಗಲಿದೆ. ಶೀಘ್ರದಲ್ಲೇ ಬಿಡಿಎ ಮನೆಗಳನ್ನು ಕಂದಾಯ ಇಲಾಖೆಗೆ ಹಸ್ತಾಂತರ ಮಾಡಲಿದೆ ಎಂದು ನಾಯಕ್ ಮಾಹಿತಿ ನೀಡಿದ್ದಾರೆ. ಆಲೂರಿನಲ್ಲಿ 1,500 ಮನೆಗಳನ್ನು ಬಿಡಿಎ ನಿರ್ಮಿಸುತ್ತಿದೆ. ಇವುಗಳಲ್ಲಿ 700 ಮನೆಗಳ ಹಂಚಿಕೆಯಾಗಿವೆ. [ಒತ್ತುವರಿ ಕಾರ್ಯಾಚರಣೆಗೆ ತಡೆ]
ಕಳೆದ ಶನಿವಾರ ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯಿಂದ ನಿರ್ಗತಿಕರಾದವರನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಲ್ಲಾಧಿಕಾರಿಗಳು ವರದಿ ನೀಡಿದ ಬಳಿಕ ನಿರ್ಗತಿಕರಾದ ಕುಟುಂಬಗಳಿಗೆ ಉಚಿತವಾಗಿ ಮನೆಗಳನ್ನು ಹಂಚಿಕೆ ಮಾಡಲಾಗುವುದು' ಎಂದು ಹೇಳಿದ್ದರು.