ಕುವೆಂಪು ಸ್ಮರಣಾರ್ಥವಾಗಿ ಅಂಚೆ ಚೀಟಿ ಬಿಡುಗಡೆ
ಬೆಂಗಳೂರು, ಆಗಸ್ಟ್ 13 : ಕುವೆಂಪು ಸ್ಮರಣಾರ್ಥ ಭಾರತೀಯ ಅಂಚೆ ಇಲಾಖೆ ರೂಪಿಸಿದ್ದ ವಿಶೇಷ ಅಂಚೆ ಚೀಟಿಯನ್ನು ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂ.ಪ. ನಾಗರಾಜಯ್ಯ ಮತ್ತು ಇನ್ಫೊಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಶನಿವಾರ ಲಾಲ್ಬಾಗ್ನಲ್ಲಿ ಬಿಡುಗಡೆ ಮಾಡಿದರು.
ಲಾಲ್ ಬಾಗಿನಲ್ಲಿ ಕಂಗೊಳಿಸುತ್ತಿದೆ ಕುಸುಮ ಕವಿಶೈಲ
ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ದೊರತು 50 ವರ್ಷಗಳು ತುಂಬಿದ ಸಂದರ್ಭವನ್ನು ಸ್ಮರಿಸುತ್ತಿರುವ ತೋಟಗಾರಿಕೆ ಇಲಾಖೆ, ಈ ಗೌರವ ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರಿಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ಸಮರ್ಪಿಸಿದೆ.
ಕುವೆಂಪು ಸ್ಮರಣಾರ್ಥ ವಿಶೇಷ ಅಂಚೆ ಚೀಟಿ ರೂಪಿಸಲು ಇದೇ ಸುಸಂದರ್ಭ ಎಂದು ತಿಳಿದ ಅಂಚೆ ಇಲಾಖೆ ಲಾಲ್ಬಾಗ್ನಲ್ಲಿ ಗುಲಾಬಿ ಹೂಗಳಿಂದ ಅರಳಿರುವ ಕುವೆಂಪು ಕುಪ್ಪಳಿ ಮನೆಯ ಎದುರು ಅಂಚೆ ಚೀಟಿ ಬಿಡುಗಡೆ ಮಾಡಿದೆ. ಈ ಅಂಚೆಚೀಟಿ 10 ರು. ಮೌಲ್ಯದ್ದಾಗಿದೆ.
Comments
English summary
Infosys Foundation chief Sudharmurti released Kuvempu commemorative stamp released on Saturday at Lalbagh, Bengaluru.
Story first published: Sunday, August 13, 2017, 11:05 [IST]