ದಸರಾ ಹಬ್ಬಕ್ಕೆ ಕೆಎಸ್ ಆರ್ ಟಿಸಿಯಿಂದ 1500 ಹೆಚ್ಚುವರಿ ಬಸ್
Recommended Video
KSRTC
Launches
1500
Special
Buses
To
Clear
Dasara
Rush
ಬೆಂಗಳೂರು, ಸೆಪ್ಟೆಂಬರ್ 27 : ದಸರಾ ಹಬ್ಬದ ಪ್ರಯುಕ್ತ ಸಾಲು-ಸಾಲು ರಜೆ ಹಿನ್ನಲೆಯಲ್ಲಿ ವಿವಿಧ ಜಿಲ್ಲೆಗಳು ಮತ್ತು ಹೊರ ರಾಜ್ಯಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ಕೆಎಸ್ಆರ್ ಟಿಸಿ ಹೆಚ್ಚುವರಿಯಾಗಿ 1500 ಬಸ್ಸುಗಳನ್ನು ಬಿಟ್ಟಿದೆ.
ದಸರೆ ಹಿನ್ನೆಲೆ : ಕೆಎಸ್ ಆರ್ ಟಿ ಸಿಯಿಂದ ನೂತನ ಬಸ್ ವ್ಯವಸ್ಥೆ
ಸೆಪ್ಟೆಂಬರ್ 28ರಿಂದ ಅಕ್ಟೋಬರ್ 2ರ ವರೆಗೆ ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಕ್ಕೆ ಈ ಕೆಎಸ್ಆರ್ ಟಿಸಿ ಹೆಚ್ಚುವರಿ ಬಸ್ಸುಗಳು ಸಂಚಾರ ನಡೆಸಲಿವೆ. ಇನ್ನು ಅಕ್ಟೋಬರ್ 3ರಿಂದ ಅ.8ರ ತನಕ ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಂದ ಬೆಂಗಳೂರಿಗೆ ಸಂಚರಿಸಲಿವೆ.
ಮೆಜೆಸ್ಟಿಕ್, ಶಾಂತಿ ನಗರ ಹಾಗೂ ಮೈಸೂರು ರಸ್ತೆಯಿಂದ ಹೆಚ್ಚುವರಿ ಬಸ್ ಗಳು ವಿವಿಧ ಜಿಲ್ಲೆ ಹಾಗೂ ರಾಜ್ಯಗಳಿಗೆ ಸಂಚಾರ ಮಾಡಲಿವೆ ಆನ್ಲೈನ್ ಮೂಲಕವೂ ಟಿಕೆಟ್ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆ ಎಸ್ ಆರ್ ಟಿಸಿ ತಿಳಿಸಿದೆ.
English summary
In order to clear rush due to Dasara being celebrated in Mysuru, Karnataka State Road Transport Corporation (KSRTC) has decided to operate 1,500 extra buses to various places in the state and outside from Bengaluru from September 28 to October 2.
Story first published: Wednesday, September 27, 2017, 13:05 [IST]