ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್‌ಆರ್‌ಟಿಸಿ ಐರಾವತದಲ್ಲಿ 699 ಬೆಳ್ಳಿದೀಪ ಪತ್ತೆ

|
Google Oneindia Kannada News

ಬೆಂಗಳೂರು, ಜನವರಿ 12: ಬೆಂಗಳೂರಿನಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ 699 ಬೆಳ್ಳಿದೀಪಗಳು ಪತ್ತೆಯಾಗಿವೆ.

ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ ಮೈಸೂರು ಭಾಗದ ಕೆಎಸ್ಆರ್‌ಟಿಸಿ ಬಸ್ ಮೆಜೆಸ್ಟಿಕ್‌ಗೆ ಸ್ಥಳಾಂತರ

ಕೆಎಸ್‌ಆರ್‌ಟಿಸಿಯ ಐರಾವತ ಕ್ಲಬ್ ಕ್ಲಾಸ್‌ ಬಸ್‌ನಲ್ಲಿ ವಾರಸುದಾರರೇ ಇಲ್ಲದ 40 ಕೆಜಿ ತೂಕದ 699 ಬೆಳ್ಳಿ ದೀಪಗಳು ಪತ್ತೆಯಾಗಿವೆ.

ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ ಮಂಗನ ಕೈಗೆ ಸ್ಟೇರಿಂಗ್ ಕೊಟ್ಟು ಕೆಲಸ ಕಳೆದುಕೊಂಡ ಕೆಎಸ್‌ಆರ್‌ಟಿಸಿ ಚಾಲಕ

ರಾತ್ರಿ 8.58ಕ್ಕೆ ಹೊಸಕೋಟೆ ಟೋಲ್‌ ಬಳಿ ನಿಗಮದ ತನಿಖಾಧಿಕಾರಿಗಳು ದಾಳಿ ನಡೆಸಿ ಬಸ್‌ ಪರಿಶೀಲನೆ ನಡೆಸಿದ್ದಾರೆ. ಆಗ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಬೆಳ್ಳಿ ವಸ್ತುಗಳು ಪತ್ತೆಯಾಗಿವೆ. ಅವುಗಳನ್ನು ವಾಣಿಜ್ಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ.

KSRTC bus crew suspended for ferrying silver lamps

ಪ್ರಭಾಕರ ರೆಡ್ಡಿ ನೇತೃತ್ವದ ತಂಡ ಬಸ್ ಸಂಖ್ಯೆ ಕೆಎ27 ಎಫ್ 2844 ತಡೆದು ಮೊದಲಿಗೆ ಟಿಕೆಟ್ ಪರಿಶೀಲಿಸಿದೆ. ಬಳಿಕ ಡಿಕ್ಕಿ ಪರಿಶೀಲಿಸಿದಾಗ ಅನುಮಾನಾಸ್ಪದವಾಗಿ ಸಾಗಿಸುತ್ತಿದ್ದ 4 ಬ್ಯಾಗ್‌ಗಳು ಪತ್ತೆಯಾಗಿದೆ. ಈ ಕುರಿತು ನಿರ್ವಾಹಕರನ್ನು ಪ್ರಶ್ನಿಸಿದಾಗ ವಾರಸುದಾರರಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್ ಬೆಂಗಳೂರಿಂದ ತಾಂಜಾವೂರು,ಕೊಯಮತ್ತೂರಿಗೆ ಹೊಸ ಸ್ಲೀಪರ್ ಬಸ್

ಬಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಚಾಲಕ ಎಚ್‌ ಕೃಷ್ಣಮೂರ್ತಿ ಮತ್ತು ಚಾಲಕ ಕಂ ನಿರ್ವಾಹಕ ಎಸ್ ನಾರಾಯಣಪ್ಪ ಅವರನ್ನು ಅಕ್ರಮಕ್ಕೆ ಸಹಕರಿಸಿರುವ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳಿಸಲಾಗಿದೆ.

English summary
A KSRTC driver and a conductor have been suspended for illegally transporting four bags of silver lamps worth about Rs 15 lakh in an Airavat Club Class bus on the Bengaluru-Vijayawada route.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X