ಆನ್ಲೈನ್ ಮೂಲಕ 280 ಕೋಟಿ ವಂಚಿಸಿದ್ದವರ ಬಂಧನ
ಬೆಂಗಳೂರು, ಡಿ.15 : ಹಣ ದ್ವಿಗುಣಗೊಳಿಸಿ ಕೊಡುವುದಾಗಿ ಆನ್ಲೈನ್ನಲ್ಲಿ ಜಾಹೀರಾತು ನೀಡಿ ಸುಮಾರು 280 ಕೋಟಿ ವಂಚನೆ ಮಾಡಿದ್ದ ಅಡೂಪ್ಸ್ ಸಂಸ್ಥೆಯ ಐವರು ಪ್ರತಿನಿಧಿಗಳನ್ನು ಕೆ.ಆರ್.ಪುರ ಪೊಲೀಸರು ಬಂಧಿಸಿದ್ದಾರೆ. ಸಂಸ್ಥೆಯ ಮುಖ್ಯಸ್ಥ ಪರಾರಿಯಾಗಿದ್ದಾನೆ.
ಅಡೂಪ್ಸ್
ಸಂಸ್ಥೆಯ
ಮುಖ್ಯಸ್ಥ
ದಾಮೋದರ್
ರೆಡ್ಡಿ
ಪರಾರಿಯಾಗಿದ್ದು,
ಸಂಸ್ಥೆಯ
ಐವರು
ಪ್ರತಿನಿಧಿಗಳು
ಪೊಲೀಸರ
ಕೈಗೆ
ಸಿಕ್ಕಿಬಿದ್ದಿದ್ದಾರೆ.
ಕರ್ನಾಟಕ,
ಆಂಧ್ರಪ್ರದೇಶ
ಸೇರಿದಂತೆ
ಮೂರು
ರಾಜ್ಯಗಳಲ್ಲಿ
ಜನರಿಗೆ
ಇವರು
ವಂಚಿಸಿದ್ದರು
ಎಂಬುದು
ಪ್ರಾಥಮಿಕ
ವಿಚಾರಣೆಯಿಂದ
ತಿಳಿದುಬಂದಿದೆ.
[ಕಿವೀಸ್
ಮಹಿಳೆ
ವಂಚನೆ
ಜಾಲ
ಬಯಲು]
ಅಡೂಪ್ಸ್ ಸಂಸ್ಥೆಯಲ್ಲಿ ಹಣ ಹೂಡಿದರೆ 140 ದಿನಗಳಲ್ಲಿ ದ್ವಿಗುಣಗೊಳಿಸಿ ಕೊಡುತ್ತೇವೆ ಎಂದು ಆರೋಪಿಗಳು ಆನ್ಲೈನ್ ಮೂಲಕ ಜಾಹೀರಾತು ನೀಡುತ್ತಿದ್ದರು. ಅಲ್ಲದೇ, ಹೂಡಿಕೆದಾರರಿಗೆ ಸಂಸ್ಥೆಯ ಲಾಭದಲ್ಲಿ ಪ್ರತಿನಿತ್ಯ ಪಾಲು ಕೊಡಲಾಗುತ್ತದೆ ಎಂದು ಆಮಿಷವೊಡುತ್ತಿದ್ದರು.
ಹೂಡಿಕೆದಾರರು ಮತ್ತಷ್ಟು ಮಂದಿಯಿಂದ ಹಣ ಹೂಡಿಸಿದರೆ ಕಮಿಷನ್ ಕೊಡುವುದಾಗಿ ದಾಮೋದರ್ ರೆಡ್ಡಿ ಅವರು ಜನರಿಗೆ ಮಾಹಿತಿ ನೀಡುತ್ತಿದ್ದರು. ಹೈದರಾಬಾದ್ ಮೂಲದ ದಾಮೋದರ್, ಕೆ.ಆರ್. ಪುರಂನಲ್ಲಿ ಮೇ ತಿಂಗಳಿನಲ್ಲಿ ಕಚೇರಿ ತೆರೆದು ವಹಿವಾಟು ಆರಂಭಿಸಿದ್ದರು.
ಮೂರು ರಾಜ್ಯದ ಸುಮಾರು ನಾಲ್ಕು ಸಾವಿರ ಜನರು ಈ ಸಂಸ್ಥೆಯಲ್ಲಿ ಹಣ ಹೂಡಿ ವಂಚನೆಗೊಳಗಾಗಿದ್ದಾರೆ. ರಾಜ್ಯದಲ್ಲಿ ಸುಮಾರು 10 ಕೋಟಿ ಹಾಗೂ ಆಂಧ್ರಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಒಟ್ಟು 280 ಕೋಟಿ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.