ಮೋದಿ ಮೌನ ಮುರಿದು ಸತ್ಯವನ್ನು ಬಿಚ್ಚಿಡಲಿ: ದಿನೇಶ್ ಗುಂಡೂರಾವ್
ಬೆಂಗಳೂರು, ಜು.26: ಸಾವಿರಾರು ಕೋಟಿ ಲೂಟಿ ಮಾಡಿದವರೆಲ್ಲ ಮೋದಿ ಸ್ನೇಹಿತರು ನರೇಂದ್ರ ಮೋದಿ ಒಬ್ಬ ಭ್ರಷ್ಟ ಪ್ರಧಾನಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
ಮೋದಿ ಕಾರ್ಪೊರೇಟ್ ಕಂಪನಿಗಳ ಪಾಲುದಾರರಾಗಿದ್ದಾರೆ., ಅವರ ಉದ್ದೇಶಗಳೇ ಬೇರೆ , ದೇಶವನ್ನು ಮಾರಾಟ ಮಾಡಲು ಮುಂದಾಗಿದ್ದಾರೆ, ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿರುವವರೆಲ್ಲರೂ ಮೋದಿ ಸ್ನೇಹಿತರೆ ಎಂದಿದ್ದಾರೆ.ಅಚ್ಛೇ ದಿನ್ ದೊಡ್ಡ ದೊಡ್ಡ ಶ್ರೀಮಂತರಿಗೆ ಮಾತ್ರ ಬಂದಿದೆ. ಮೋದಿ ಮೌನಬಿಟ್ಟು ಜನರ ಮುಂದೆ ಸತ್ಯವನ್ನು ಬಿಚ್ಚಿಡಲಿ ಎಂದು ಒತ್ತಾಯಿಸಿದ್ದಾರೆ.
ಲೋಕಸಭೆ ಚುನಾವಣೆ : ಕರ್ನಾಟಕ ಕಾಂಗ್ರೆಸ್ ತೆಗೆದುಕೊಂಡ ನಿರ್ಧಾರಗಳು
ಬಡವರ ಪರ ಯೋಜನೆಗಳ ಬಗ್ಗೆ ಮೋದಿಗೆ ಕಾಳಜಿ ಇಲ್ಲ.ಮುಂದಿ ಕಲಾಪದಲ್ಲಿ ಉತ್ತರ ಕೊಡದಿದ್ದರೆ ಕಾಂಗ್ರೆಸ್ ಪಕ್ಷ ದೊಡ್ಡ ಮಟ್ಟದ ಹೋರಾಟವನ್ನು ಕೈಗೆತ್ತಿಕೊಳ್ಳಲಿದೆ. ಅಚ್ಛೇದಿನ್ ಎಂದು ಮೋದಿ ಹೇಳುತ್ತಾರೆ ಹಾಗಾದರೆ ಬಡವರಿಗೆ ಏನೇನು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ, ಬಡವರಿಗೆ ಏನೇನು ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಹೇಳಲಿ ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.
ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ಈಶ್ವರ್ ಖಂಡ್ರೆ, ಜಿ ಪರಮೇಶ್ವರ್ ಹಾಗೂ ತನ್ನ ಮಧ್ಯೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.