ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋರಮಂಗಲ ನಿವಾಸಿಗಳಿಗೆ ಮತ್ತೆ ದುಸ್ವಪ್ನವಾದ ಮಳೆ ನೀರು

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 30: ಕಳೆದ ವರ್ಷದ ಭಾರಿ ಮಳೆಗೆ ನಡುಗಡ್ಡೆಯಂತಾಗಿದ್ದ ಬೆಂಗಳೂರಿನ ಕೋರಮಂಗಲ ಪ್ರದೇಶ ಕಳೆದ ಮೂರು ದಿನಗಳಿಂದ ಸುರಿದ ಮಳೆಗೆ ಮತ್ತೊಮ್ಮೆ ಕಳೆದ ವರ್ಷದಂತೆಯೇ ಪ್ರವಾಹ್ಕಕೆ ತುತ್ತಾಗುವ ಆತಂಕಕ್ಕೆ ಸಿಲುಕಿದೆ.

ಕೋರಮಂಗಲ ಪ್ರದೇಶದ ರಸ್ತೆಗಳು ಚರಂಡಿಗಳು, ಹಾಗೂ ಒಳಚರಂಡಿಗಳು, ಕಸ ಹಾಗೂ ತ್ಯಾಜ್ಯದಿಂದ ತುಂಬಿ ಹೋಗಿದ್ದು ಮಳೆ ನೀರು ಹರಿದುಹೋಗದೆ ಇಡೀ ಪ್ರದೇಶ ಜಲಾವೃತಗೊಳ್ಳುವಂತಾಗಿದೆ.

ಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರುಸ್ವಚ್ಛ ಭಾರತದ ಹಣವನ್ನು ಕಟ್ಟಡಕ್ಕೆ ಬಳಸಿದ ಪಾಲಿಕೆ: ಮೋದಿಗೆ ದೂರು

ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ಇತ್ತೀಚೆಗೆ ಮಳೆ ನೀರು ಹರಿದು ಹೋಗಲು ಗೋಡೆಯೊಂದನ್ನು ತೆರವುಗೊಳಿಸಲಾಗಿದೆಯಾದರೂ ಇದರಿಂದಾಗಿ ಸ್ಥಳೀಯ ನಿವಾಸಿಗಳು ಮತ್ತಷ್ಟು ಸಮಸ್ಯೆಯನ್ನು ಎದುರಿಸುವಂತಾಗಿದೆ.

Koramangala residents fed up with rain water logging again

ಅಲ್ಲದೆ ಮಹಾರಾಜ ಸಿಗ್ನಲ್‌ನಲ್ಲಿ ಗೋಡೆ ತೆರವಿನಿಂದಾಗಿ ವಿಪರೀತ ಟ್ರಾಫಿಕ್ ಜಾಮ್ ನಿಂದಾಗಿ ದ್ವಿಚಕ್ರ ವಾಹನ ಚಾಲಕರು, ಕಾರು ಚಾಲಕರು ಪರದಾಡುವಂತಾಗಿದೆ.

ಬಿಬಿಎಂಪಿಯಿಂದ 2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸ್ವಚ್ಛತಾ ಕಾರ್ಯಬಿಬಿಎಂಪಿಯಿಂದ 2 ಸಾವಿರ ಕೋಟಿ ವೆಚ್ಚದಲ್ಲಿ ರಸ್ತೆ ಸ್ವಚ್ಛತಾ ಕಾರ್ಯ

ಕೋರಮಂಗಲ ನಿವಾಸಿಗಳು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಿದ್ದರೂ ಬಿಬಿಎಂಪಿ ಸೇರಿದಂತೆ ಯಾವುದೇ ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ, ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ಘನತ್ಯಾಜ್ಯದಿಂದ ಈ ಪ್ರದೇಶ ತುಂಬಿ ಹೋಗಿದ್ದು ಲೋಡ್ ಗಟ್ಟಲೆ ತ್ಯಾಜ್ಯವನ್ನು ಸಾಗಿಸಿದರೂ ಸಮಸ್ಯೆ ಪರಿಹಾರ ಆಗುವಂತೆ ಕಾಣುತ್ತಿಲ್ಲ.

ನಮ್ಮ ಸಮಸ್ಯೆಯನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ಹೇಳಿಕೊಂಡು ಬೇರೆಡೆ ಸಾಗಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದೇವೆ. ಕಳೆದ ಮೂರ್ನಾಲ್ಕು ದಿನಗಳಿಂದ ಕೇವಲ ಆರುನೂರು ಮೀಟರ್ ರಸ್ತೆಯನ್ನು ಸ್ವಚ್ಛಗೊಳಿಸಲು ಇಪ್ಪತ್ತು ನಿಮಿಷಗಳ ಕಾಲ ಮಾತ್ರ ಬಿಬಿಎಂಪಿ ಕಾರ್ಮಿಕರು ಕೆಲಸ ಮಾಡಿದಂತೆ ನಟಿಸಿದರಾದರೂ ಚರಂಡಿಗಳು ಸ್ವಚ್ಛಗೊಳ್ಳದೆ ಮತ್ತೆ ಎಂದಿನಂತೆ ನೀರು ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.

ಘನತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ವಿಫಲ: ಸುಪ್ರೀಂ ದಂಡಘನತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ವಿಫಲ: ಸುಪ್ರೀಂ ದಂಡ

ಕೋರಮಂಗಲ ಪ್ರದೇಶದಲ್ಲಿ ಚರಂಡಿ ನೀರು ರಸ್ತೆಗಳಿಗೆ ನುಗ್ಗಿ ಸಂಪೂರ್ಣ ಜಲಾವೃತಗೊಂಡು ಬಳಿಕ ಮನೆಗಳಿಗೆ ನುಗ್ಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ದುರವಸ್ಥೆಯನ್ನು ಅಧಿಕಾರಿಗಳು ಕಣ್ಣಾರೆ ಕಂಡರೂ ಏನೂ ಮಾಡುತ್ತಿಲ್ಲ. ಅಲ್ಲದೆ ಈ ಪ್ರದೇಶದಲ್ಲಿ ಟ್ರಾಫಿಕ್ ಸಮಸ್ಯೆ ಹಾಗೂ ನೀರು ನಿಲ್ಲುವ ಸಮಸ್ಯೆಯನ್ನು ದೂರಮಾಡಲು ಸಾಧ್ಯವಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

English summary
For the last three days residents of Koramangala were worried about flood in their area again as they were experienced flood like situation in 2017 due to heavy rain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X