ಹೆಬ್ಬಾಳ ಜಂಕ್ಷನ್ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ
ಬೆಂಗಳೂರು, ಮಾರ್ಚ್ 07: ಹೆಬ್ಬಾಳ ಜಂಕ್ಷನ್ ನಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಪ್ರತಿಷ್ಠಾಪನೆ ಗೊಂಡಿದೆ. ಮಾರ್ಚ್ ಅಂತ್ಯದೊಳಗಾಗಿ ಉದ್ಘಾಟನೆಗೊಳ್ಳಲಿದೆ. ಈ ಮೂಲಕ ದಶಕದ ಹಿಂದೆ ಬಿಡಿಎ ಸಿದ್ಧಪಡಿಸಿದ್ದ ಯೋಜನೆ ಪೂರ್ತಿಯಾಗಿದ್ದು, ಈ ಮಾಸಾಂತ್ಯಕ್ಕೆ ಉದ್ಘಾಟನೆಯಾಗಲಿದೆ.
ವಿಧಾನ ಸೌಧ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ವಿಗ್ರಹ ಸ್ಥಾಪನೆ
ಒಂದು ಕೋಟಿ ರೂ. ಮೊತ್ತದ ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದ ಬಳಿಕ ಹಲವು ಅಡೆತಡೆ ಎದುರಾಗಿತ್ತು. ಎಲ್ಲವೂ ನಿವಾರಣೆಯಾಗಿರುವ ಕಾರಣ, ಪ್ರತಿಮೆ ಸ್ಥಾಪನೆ ಕಾರ್ಯವೂ ಮುಗಿದಿದೆ. ಅಂತಿಮ ಕಾರ್ಯಗಳಷ್ಟೇ ಬಾಕಿ ಉಳಿದಿದ್ದು, ಈ ತಿಂಗಳೊಳಗೆ ಅದನ್ನು ಮುಗಿಸುವ ಭರದಿಂದ ಕಾಮಗಾರಿ ನಡೆಸಲಾಗುತ್ತಿದೆ.
ಕೋಟೆ ಮಾದರಿ ವೇದಿಕೆ: ಅಶ್ವಾರೂಢ ಭಂಗಿಯಲ್ಲಿರುವ ನಾಡಪ್ರಭುವಿನ ಪ್ರತಿಮೆ ನಿಲ್ಲಿಸಲು ಕೋಟೆ ಮಾದರಿಯ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ನೆಲದಿಂದ 30ಅಡಿ ಎತ್ತರ ಹಾಗೂ 16 ಅಡಿ ಅಗಲದ ಕಲ್ಲಿನ ಕೋಟೆಯ ಚಿತ್ರಣ ಮೂಡಿಸಲಾಗಿದೆ. ಈ ವೇದಿಕೆ ಮೇಲೆ 2750ಕೆಜಿ ತೂಕದ ಕೆಂಪೇಗೌಡರ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.ಪ್ರತಿಮೆ ಸ್ಥಾಪನೆಯಾಗಲಿರುವ ಜಾಗ ಬಿಡಿಎಗೆ ಸೇರಿದ್ದು, ಅಲ್ಲೀಗ ಉದ್ಯಾನ ಅಸ್ತಿತ್ವದಲ್ಲಿದೆ, ಟ್ರೀ ಪಾರ್ಕ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿರುವ ಉದ್ಯಾನವನ್ನು ಇನ್ನಷ್ಟು ಚಂದ ಮಡುವ ಆಲೋಚನೆ ಇದೆ ಎಂದು ಬಿಡಿಎ ಎಂಜಿಯರ್ ತಿಳಿಸಿದ್ದಾರೆ.