ಐಟಿ, ಕೈಗಾರಿಕೆಗಳಿಗೆ ಹೊಸ ನೀತಿ : ಸಿಎಂ
ಬೆಂಗಳೂರು, ಆ.9 : ಮಾಹಿತಿ ತಂತ್ರಜ್ಞಾನ ಕಂಪನಿಗಳು ಮತ್ತು ಕೈಗಾರಿಕೆಗಳಿಗೆ ಮೂಲಸೌಕರ್ಯ ಒದಗಿಸಲು ಸರ್ಕಾರ ನೂತನ ಮೂಲ ಸೌಕರ್ಯನೀತಿಯನ್ನು ರೂಪಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ
ಶುಕ್ರವಾರ
ನಡೆದ
ಭಾರತೀಯ
ಕೈಗಾರಿಕೆಗಳ
ಒಕ್ಕೂಟದ
(ಸಿಐಐ)
10ನೇ
ಶೃಂಗ
ಸಭೆ
ಉದ್ಘಾಟಿಸಿ
ಮಾತನಾಡಿದ
ಅವರು,
ಸರ್ಕಾರ
ಜಾರಿಗೆ
ತರಲಿರುವ
ಈ
ನೂತನ
ಮೂಲಸೌಕರ್ಯ
ನೀತಿಯಿಂದ
ಬಂಡವಾಳ
ಹೂಡಿಕೆ
ಮಾಡಲು
ಕಂಪನಿಗಳಿಗೆ
ಅನುಕೂಲವಾಗಲಿದೆ
ಎಂದರು.
ಬಂಡವಾಳ ಹೂಡಿಕೆ, ಅವಿಷ್ಕಾರಗಳಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರ ಸಿದ್ಧವಾಗಿದೆ ಎಂದು ಹೇಳಿದ ಸಿದ್ದರಾಮಯ್ಯ, ತೊಂಬತ್ತರ ದಶಕದಿಂದ ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ರಾಜಧಾನಿ ಎಂಬ ಖ್ಯಾತಿ ಗಳಿಸಿದೆ. ಈ ಖ್ಯಾತಿ ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರುಪಡೆದುಕೊಳ್ಳಲು ಕಾರಣವಾಗಿದೆ ಎಂದು ತಿಳಿಸಿದರು.
ರಾಜ್ಯದ ಅಭಿವೃದ್ಧಿಗೆ ಸಹಾಯಕವಾಗುವಂತಹ ನೂತನ ಕೈಗಾರಿಕಾ ನೀತಿ ಜಾರಿಗೆ ತರಲಾಗುತ್ತಿದೆ. ಸಿಐಐ ನೀಡುವ ಶಿಫಾರಸುಗಳು ನೂತನ ನೀತಿ ರೂಪಿಸಲು ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು. ಹೊಸ ನೀತಿ ಕಂಪನಿಗಳು ಮತ್ತು ಕೈಗಾರಿಕೆಗಳು ಬಂಡವಾಳ ಹೂಡಿಕೆ ಮಾಡಲು ಮೂಲಸೌಕರ್ಯ ಸೇವೆಗಳನ್ನು ಒಗದಿಸಲು ಅನುಕೂಲ ಒಸಗಿಸಲಿವೆ ಎಂದರು.
ಸಿಐಐ ಜೊತೆ ಸೇರಿ ರಾಜ್ಯ ಸರ್ಕಾರ ಜಂಟಿ ವೈಮಾನಿಕ ಕಾರ್ಯಪಡೆ ರಚಿಸಿದೆ. ಈ ಕಾರ್ಯಪಡೆ ಮೂಲಕ ವೈಮಾನಿಕ ಕೈಗಾರಿಕಾ ಅಭಿವೃದ್ಧಿಗೆ ಸೂಕ್ತ ವ್ಯವಸ್ಥೆ ರೂಪಿಸಲಾಗುವುದು. ಕಾರ್ಯಪಡೆ ನೀಡಿರುವ ಶಿಫಾರಸುಗಳು ಅನುಷ್ಠಾನದ ಹಂತದಲ್ಲಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.