ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಎಂ-ಆಡಳಿತ' ಜಾರಿಗೆ ಸಿದ್ದರಾಮಯ್ಯ ಸರ್ಕಾರ ಸಜ್ಜು

By Kiran B Hegde
|
Google Oneindia Kannada News

ಬೆಂಗಳೂರು, ನ. 20: ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದೀರಿ, ಏನಾಗಿದೆಯೋ ಗೊತ್ತಿಲ್ಲ, ವಿದ್ಯುತ್ ಬಿಲ್ ತುಂಬಲು ಸಮಯವಿಲ್ಲ, ಹೃದ್ರೋಗಿಯೋರ್ವನಿಗೆ ಪ್ರತಿ ಬಾರಿ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಲು ಹಣವಿಲ್ಲ... [ಆಧಾರ್ ನೋಂದಣಿ ಮತ್ತಷ್ಟು ಸುಲಭ]

ಇಷ್ಟೇ ಅಲ್ಲದೆ, ದೈನಂದಿನ ಅನೇಕ ಅಗತ್ಯ ಕಾರ್ಯಗಳಿಗಾಗಿ ವಿವಿಧ ಸೇವಾ ಕೇಂದ್ರಗಳಿಗೆ ತೆರಳಿ ಸರದಿ ಸಾಲಿನಲ್ಲಿ ನಿಲ್ಲುವುದು ಇಂದಿನ ವೇಗದ ಜಗತ್ತಿನಲ್ಲಿ ಸಾಧ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಸಕಾಲ ಯೋಜನೆ ಜಾರಿಗೆ ತಂದಿದ್ದರೂ ಇಂದಿನ ದಿನದ ವೇಗಕ್ಕೆ ಹೊಂದಿಕೊಳ್ಳುತ್ತಿಲ್ಲ. ಆದ್ದರಿಂದ ಈ ಸಮಸ್ಯೆ ನಿವಾರಿಸಲು ಕರ್ನಾಟಕ ಸರ್ಕಾರ ಮೊಬೈಲ್ ತಂತ್ರಜ್ಞಾನಕ್ಕೆ ಮೊರೆ ಹೋಗಿದೆ. [ಆಧಾರ್ ಮಾಹಿತಿ ಬದಲಾವಣೆ ಹೇಗೆ]

siddu

ರಾಜ್ಯ ಸರ್ಕಾರ ಮೊಬೈಲ್ಒನ್ (ಎಂ-ಒನ್) ಎಂಬ ಆಪ್ ಅಭಿವೃದ್ಧಿಪಡಿಸಿದೆ. ಈ ಆಪ್‌ನಲ್ಲಿ 4,281 ಸೇವೆಗಳು ಲಭ್ಯವಿರುತ್ತವೆ..! ಇದೇ ವರ್ಷ ಡಿಸೆಂಬರ್ 8ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿನಲ್ಲಿ ಜನಸೇವೆಗೆ ಅರ್ಪಿಸಲಿದ್ದಾರೆ. ಈ ಮೂಲಕ ಎಂ-ಆಡಳಿತ ಜಾರಿಗೊಳಿಸಿದ ದೇಶದ ಪ್ರಥಮ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ. [ಸಕಾಲಕ್ಕೆ ರಾಷ್ಟ್ರೀಯ ಪ್ರಶಸ್ತಿ]

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಕಾಂಗ್ರೆಸ್ ಸರ್ಕಾರ ಆಮೆ ವೇಗದಲ್ಲಿ ನಡೆಯುತ್ತಿದೆ ಎಂಬ ಆರೋಪಕ್ಕೆ ಉತ್ತರವಾಗಿ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಸಾವಿರಾರು ಸರ್ಕಾರಿ ಸೇವೆಗಳು ಜನರ ಮೊಬೈಲ್ ಪರದೆಯಲ್ಲಿಯೇ ಸಿಗಲಿದೆ. ಇದಕ್ಕಾಗಿ ಜನರು ಒಂದು ಸ್ಮಾರ್ಟ್‌ಫೋನ್ ಖರೀದಿಸಿ, ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಷ್ಟೇ. [ಸಕಾಲ ಸೇವೆ ಆನ್ ಲೈನ್]

English summary
Government of Karnataka all set to launch M-governance in the state. Government has developed a mobile app MovileOne (M-One). Through this people may get 4,281 services through mobile only.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X