'ಎಂ-ಆಡಳಿತ' ಜಾರಿಗೆ ಸಿದ್ದರಾಮಯ್ಯ ಸರ್ಕಾರ ಸಜ್ಜು
ಬೆಂಗಳೂರು, ನ. 20: ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದೀರಿ, ಏನಾಗಿದೆಯೋ ಗೊತ್ತಿಲ್ಲ, ವಿದ್ಯುತ್ ಬಿಲ್ ತುಂಬಲು ಸಮಯವಿಲ್ಲ, ಹೃದ್ರೋಗಿಯೋರ್ವನಿಗೆ ಪ್ರತಿ ಬಾರಿ ಪರೀಕ್ಷೆಗಾಗಿ ಆಸ್ಪತ್ರೆಗೆ ತೆರಳಲು ಹಣವಿಲ್ಲ... [ಆಧಾರ್ ನೋಂದಣಿ ಮತ್ತಷ್ಟು ಸುಲಭ]
ಇಷ್ಟೇ
ಅಲ್ಲದೆ,
ದೈನಂದಿನ
ಅನೇಕ
ಅಗತ್ಯ
ಕಾರ್ಯಗಳಿಗಾಗಿ
ವಿವಿಧ
ಸೇವಾ
ಕೇಂದ್ರಗಳಿಗೆ
ತೆರಳಿ
ಸರದಿ
ಸಾಲಿನಲ್ಲಿ
ನಿಲ್ಲುವುದು
ಇಂದಿನ
ವೇಗದ
ಜಗತ್ತಿನಲ್ಲಿ
ಸಾಧ್ಯವಿಲ್ಲ.
ಹಿಂದಿನ
ಬಿಜೆಪಿ
ಸರ್ಕಾರ
ಸಕಾಲ
ಯೋಜನೆ
ಜಾರಿಗೆ
ತಂದಿದ್ದರೂ
ಇಂದಿನ
ದಿನದ
ವೇಗಕ್ಕೆ
ಹೊಂದಿಕೊಳ್ಳುತ್ತಿಲ್ಲ.
ಆದ್ದರಿಂದ
ಈ
ಸಮಸ್ಯೆ
ನಿವಾರಿಸಲು
ಕರ್ನಾಟಕ
ಸರ್ಕಾರ
ಮೊಬೈಲ್
ತಂತ್ರಜ್ಞಾನಕ್ಕೆ
ಮೊರೆ
ಹೋಗಿದೆ.
[ಆಧಾರ್
ಮಾಹಿತಿ
ಬದಲಾವಣೆ
ಹೇಗೆ]
ರಾಜ್ಯ ಸರ್ಕಾರ ಮೊಬೈಲ್ಒನ್ (ಎಂ-ಒನ್) ಎಂಬ ಆಪ್ ಅಭಿವೃದ್ಧಿಪಡಿಸಿದೆ. ಈ ಆಪ್ನಲ್ಲಿ 4,281 ಸೇವೆಗಳು ಲಭ್ಯವಿರುತ್ತವೆ..! ಇದೇ ವರ್ಷ ಡಿಸೆಂಬರ್ 8ರಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಗಳೂರಿನಲ್ಲಿ ಜನಸೇವೆಗೆ ಅರ್ಪಿಸಲಿದ್ದಾರೆ. ಈ ಮೂಲಕ ಎಂ-ಆಡಳಿತ ಜಾರಿಗೊಳಿಸಿದ ದೇಶದ ಪ್ರಥಮ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಳ್ಳಲಿದೆ. [ಸಕಾಲಕ್ಕೆ ರಾಷ್ಟ್ರೀಯ ಪ್ರಶಸ್ತಿ]
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದು. ಕಾಂಗ್ರೆಸ್ ಸರ್ಕಾರ ಆಮೆ ವೇಗದಲ್ಲಿ ನಡೆಯುತ್ತಿದೆ ಎಂಬ ಆರೋಪಕ್ಕೆ ಉತ್ತರವಾಗಿ ಈ ಆಪ್ ಅಭಿವೃದ್ಧಿಪಡಿಸಲಾಗಿದೆ. ಈ ಮೂಲಕ ಸಾವಿರಾರು ಸರ್ಕಾರಿ ಸೇವೆಗಳು ಜನರ ಮೊಬೈಲ್ ಪರದೆಯಲ್ಲಿಯೇ ಸಿಗಲಿದೆ. ಇದಕ್ಕಾಗಿ ಜನರು ಒಂದು ಸ್ಮಾರ್ಟ್ಫೋನ್ ಖರೀದಿಸಿ, ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕಷ್ಟೇ. [ಸಕಾಲ ಸೇವೆ ಆನ್ ಲೈನ್]