ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದರೆ ಅಧಿಕಾರಿಗಳಿಗೆ ಜೈಲು
ಬೆಂಗಳೂರು, ನವೆಂಬರ್ 29: ಅಕ್ರಮ ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದರೆ ಆ ಅಧಿಕಾರಿಗಳನ್ನು ಕೆಎಂಸಿ ಕಾಯ್ದೆ ಪ್ರಕಾರ ಗರಿಷ್ಠ 2 ವರ್ಷ ಜೈಲು ಶಿಕ್ಷೆ ಹಾಗೂ ಗರಿಷ್ಠ 50 ಸಾವಿರ ದಂಡ ನಿಗದಿಪಡಿಸಲಾಗಿದೆ.
ಕಸವನಹಳ್ಳಿ ಕಟ್ಟಡ ದುರಂತ : 15 ಕಾರ್ಮಿಕರ ರಕ್ಷಣೆ
ಆಕ್ಷೇಪ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿದೆ. ನಗರದಲ್ಲಿ ಸಾವಿರಾರು ಅಕ್ರಮ ಕಟ್ಟಡಗಳು ನಿರ್ಮಾಣಗೊಂಡಿವೆ ಹಾಗೂ ನಿರ್ಮಾಣ ಹಂತದಲ್ಲಿವೆ, ಈ ನಿಯಮ ಜಾರಿಯಾದರೆ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಬ್ರೇಕ್ ಬೀಳಲಿದೆ.
ಒತ್ತೆ ಇಟ್ಟಿರುವ ಎಲ್ಲಾ ಆಸ್ತಿ ವರ್ಷದಲ್ಲಿ ಬಿಬಿಎಂಪಿ ಸುಪರ್ದಿಗೆ: ಪರಮೇಶ್ವರ
ಯಾವಾಗ ಶಿಕ್ಷೆ ನೀಡಬಹುದು:ಅಕ್ರಮವಾಗಿ ಹಾಗೂ ಅನಧಿಕೃತವಾಗಿ ಕಟ್ಟಡಗಳ ನಿರ್ಮಾಣ, ಕಟ್ಟಡ ನವೀಕರಣಕ್ಕೆ ಸಹಕರಿಸಿದರೆ, ನಿವೇಶನದ ಮಾಲೀಕರು ಘೋಷಿಸಿಕೊಂಡ ಅಥವಾ ಮಂಜೂರಾತಿ ಪಡೆದ ನಕ್ಷೆಗೆ ವಿರುದ್ಧವಾಗಿ ಕಟ್ಟಡ ನಿರ್ಮಾಣ, ನವೀಕರಣಕ್ಕೆ ಅವಕಾಶ, ನಿಯಮ ಉಲ್ಲಂಘಿಸಿ ಕಟ್ಟಡದಲ್ಲಿ ಹೆಚ್ಚುವರಿ ಅಂತಸ್ತು , ಗೋಡೆಗಳು, ಫೆನ್ಸ್, ಶೆಡ್ ಗಳ ನಿರ್ಮಾಣಕ್ಕೆ ಅನುಮತಿ ನೀಡುವುದು ಇವೆಲ್ಲವನ್ನು ಮಾಡಿದರೆ ಜೈಲಿಗೆ ಕಳುಹಿಸಲಾಗುತ್ತದೆ.
ಅಕ್ರಮ ನಿರ್ಮಾಣಕ್ಕೆ ಕಾರಣವಾದ ಅಧಿಕಾರಿಗಳಿಗೆ ಶಿಕ್ಷೆ ಪ್ರಮಾಣ ನಿಗದಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.