ಕರ್ನಾಟಕ ಕೇಸರಿಯಾಗಿಲ್ಲ, ವರ್ಣರಂಜಿತವಾಗಿದೆ: ಪ್ರಕಾಶ್ ರೈ
ಬೆಂಗಳೂರು, ಮೇ 20: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರನ್ನು ಜಸ್ಟ್ ಆಸ್ಕಿಂಗ್ ಅಭಿಯಾನದ ಮೂಲಕ ಕಾಡುತ್ತಿದ್ದ ನಟ ಪ್ರಕಾಶ್ ರೈ ಅವರು, ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಪತನದ ಬಗ್ಗೆ ಟ್ವೀಟ್ ಮಾಡಿದ್ದಾರೆ.
"ಕರ್ನಾಟಕ ಕೇಸರಿಯಾಗುವುದಿಲ್ಲ. ಆದರೆ ವರ್ಣರಂಜಿತವಾಗಿ ಮುಂದುವರಿಯಲಿದೆ. ಶುರುವಾಗುವುದಕ್ಕಿಂತಲೂ ಮೊದಲೇ ಮ್ಯಾಚ್ ಮುಗಿದಿದೆ" ಎಂದು 55 ಗಂಟೆಗಳಲ್ಲೇ ಪತನವಾದ ಯಡಿಯೂರಪ್ಪ ಸರ್ಕಾರದ ಬಗ್ಗೆ ನಟ, ನಿರ್ದೇಶಕ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.
ಸೈಲೆಂಟ್ ಆಗಿದ್ದ ಪ್ರಕಾಶ್ ರೈ, ವೈಲೆಂಟ್ ಆಗಿ #JustAsking
ಈ
ಬಗ್ಗೆ
ಟ್ವೀಟ್
ಮಾಡಿರುವ
ರೈ,
"ಶುರುವಾಗುವುದಕ್ಕೂ
ಮೊದಲೇ
ಮ್ಯಾಚ್
ಮುಗಿದಿದೆ.
56ನ್ನು
ಮರೆತುಬಿಡಿ
55
ಗಂಟೆಗಳ
ಕಾಲವೂ
ಉಳಿಸಲು
ಸಾಧ್ಯವಾಗಿಲ್ಲ.
KARNATAKA is not going to be SAFFRON...but will continue to be COLOURFUL....Match over before it began...forget 56 couldn’t hold on for 55 hours..jokes apart...dear CITIZENS now get ready for more muddy politics..will continue to stand for the CITIZENS and CONTINUE #justasking..
— Prakash Raj (@prakashraaj) May 19, 2018
ತಮಾಷೆಯನ್ನು ಬದಿಗಿಡುವುದಾದರೆ, ರಾಜಕೀಯ ಕೆಸರೆರಚಾಟಕ್ಕೆ ಪ್ರಜೆಗಳು ಇನ್ನು ತಯಾರಾಗಬೇಕಾಗಿದೆ. ಪ್ರಜೆಗಳಿಗೆ ಹೋರಾಟ ಮಾಡಲು ಇನ್ನೂ ಎದ್ದು ನಿಲ್ಲುತ್ತೇನೆ ಹಾಗು #justasking ಮುಂದುವರಿಸುತ್ತೇನೆ" ಎಂದಿದ್ದಾರೆ.
@sanjivbhatt 🙏🙏thank you sir...and to each and everyone who realised the NEED TO QUESTION and stood by me in this journey.... it’s a beginning....miles to go....Lets continue #justasking ...WHO EVER IS IN POWER...to be answerable and accountable to us CITIZENS https://t.co/GKGwqxYe8W
— Prakash Raj (@prakashraaj) May 20, 2018
ತನ್ನ ಜಸ್ಟ್ ಆಸ್ಕಿಂಗ್ ಆಂದೋಲನದ ಭಾಗವಾಗಿ ಪ್ರಕಾಶ್ ರೈ ಕೇಂದ್ರ ಸರಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ವಿಶ್ವಾಸಮತಯಾಚನೆಯಲ್ಲಿ ವಿಫಲವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ಪ್ರಕಾಶ್ ರೈ ಈ ಟ್ವೀಟ್ ಮಾಡಿದ್ದಾರೆ.