ಪೊಲೀಸರ ಮಕ್ಕಳಿಗಾಗಿ ಸಿಬಿಎಸ್ ಸಿ ಪಠ್ಯಕ್ರಮದ ಶಾಲೆ : ಸಿದ್ದರಾಮಯ್ಯ
ಪೊಲೀಸರು ದಿನದ 24 ಗಂಟೆ ದುಡಿಯುವವರು. ಅವರಿಗೆ ಖಾಸಗಿ ಜೀವನ ಕಡಿಮೆ. ಮನೆಯ ಕಡೆ ಗಮನ ಕೊಡುವುದು ಕಷ್ಟ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಾಲೆಗಳನ್ನು ಆರಂಭಿಸಲಾಗುತ್ತಿದೆ
ಬೆಂಗಳೂರು, ಅಕ್ಟೋಬರ್ 21 : ಪೊಲೀಸರು ದಿನದ 24 ಗಂಟೆ ದುಡಿಯುವವರು. ಅವರಿಗೆ ಖಾಸಗಿ ಜೀವನ ಕಡಿಮೆ. ಮನೆಯ ಕಡೆ ಗಮನ ಕೊಡುವುದು ಕಷ್ಟ. ಅವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಶಾಲೆಗಳನ್ನು ಆರಂಭಿಸಲಾಗುತ್ತಿದೆ. ಸಿಬಿಎಸ್ ಸಿ ಪಠ್ಯಕ್ರಮದ ಶಾಲೆಗಳನ್ನು ಪೊಲೀಸರ ಮಕ್ಕಳಿಗಾಗಿ ತೆರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಪೊಲೀಸ್ ಹುತಾತ್ಮ ದಿನವಾದ ಇಂದು ಹುತಾತ್ಮ ಪೊಲೀಸರಿಗೆ ನಮನ ಸಲ್ಲಿಸಿದ ಬಳಿಕ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದರು.[ಪೊಲೀಸ್ ಇಲಾಖೆಯಲ್ಲಿ ಅಶಿಸ್ತು ಸಹಿಸಲಾಗದು : ಸಿದ್ದರಾಮಯ್ಯ]
ಪೊಲೀಸರ
ಆರೋಗ್ಯ
ತಪಾಸಣೆಗೆ
ಕ್ರಮ
ಕೈಗೊಳ್ಳಲಾಗಿದೆ.
ಕಾರ್ಯನಿಮಿತ್ತ
ಬೆಂಗಳೂರಿಗೆ
ಬರುವ
ಸಿಬ್ಬಂದಿಗೆ
15
ಕೋಟಿ
ರೂ.ವೆಚ್ಚದಲ್ಲಿ
ವಸತಿ
ಸೌಕರ್ಯ
ಕಲ್ಪಿಸಲಾಗುತ್ತಿದೆ.
ಪ್ರತಿ
ಯೂನಿಟ್
ನಲ್ಲಿ
ಕ್ಯಾಂಟೀನ್
ತೆರೆಯಲಾಗುತ್ತಿದೆ
ಎಂದೂ
ಮುಖ್ಯಮಂತ್ರಿಗಳು
ಹೇಳಿದರು.
ಇತ್ತೀಚೆಗೆ
ಪೊಲೀಸರು
ಆತ್ಮಹತ್ಯೆ
ಗೆ
ಶರಣಾಗುತ್ತಿದ್ದಾರೆ.
ಅದು
ಹೇಡಿತನ
ಎಂದು
ನ್ಯಾಯಾಲಯವೇ
ಹೇಳಿದೆ.
ಆತ್ಮಹತ್ಯೆಗೆ
ಮುನ್ನ
ಕುಟುಂಬದ
ಬಗ್ಗೆ
ಯೋಚನೆ
ಮಾಡಬೇಕು.
ಮಾಡಿದರೆ
ಆತ್ಮಹತ್ಯೆಯ
ದುಸ್ಸಾಹಸಕ್ಕೆ
ಕೈ
ಹಾಕುವುದಿಲ್ಲ
ಎಂದು
ಮುಖ್ಯಮಂತ್ರಿಗಳು
ಸಲಹೆ
ಮಾಡಿದರು.
Participated in Police Memorial Day celebration at KSRP parade ground in Koramangala, Bengaluru today. pic.twitter.com/hBUBnKdc5k
— CM of Karnataka (@CMofKarnataka) October 21, 2016
ಪೊಲೀಸರು ಆತ್ಮಸ್ಥೈರ್ಯದಿಂದ ಕೆಲಸ ಮಾಡಬೇಕು. ಪೊಲೀಸರು, ರೈತರು ಯಾರೇ ಅಗಲಿ, ಆತ್ಮಹತ್ಯೆಗೆ ಶರಣಾಗಬಾರದು ಎಂದು ಕಳಕಳಿಯಿಂದ ಮನವಿ ಮಾಡುತ್ತೇನೆ ಎಂದೂ ಮುಖ್ಯಮಂತ್ರಿಗಳು ಹೇಳಿದರು.