ದೆಹಲಿಗೆ ಹಾರಿದ ಸಿದ್ದರಾಮಯ್ಯ, ಪರಮೇಶ್ವರ್, ಗುಂಡೂರಾವ್
ಬೆಂಗಳೂರು, ಜನವರಿ 13: ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷ ದಿನೇಶ್ ಗುಂಡೂರವ್ ಅವರು ಶನಿವಾರ ಬೆಳಿಗ್ಗೆ ಹೈಕಮಾಂಡ್ ಭೇಟಿ ಮಾಡಲು ದೆಹಲಿ ತೆರಳಿದ್ದಾರೆ.
ನವ ಕರ್ನಾಟಕ ನಿರ್ಮಾಣ ಯಾತ್ರೆ ಮುಗಿದ ಮರುದಿನವೇ ದೆಹಲಿ ಪ್ರವಾಸ ಕೈಗೊಂಡಿದ್ದು, ರಾಜ್ಯದ ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ವರದಿ ಒಪ್ಪಿಸಲಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಅನ್ನು ಸೋಲಿಸಲು ಬಿಜೆಪಿ-ಜೆಡಿಎಸ್ ಒಳ ಒಪ್ಪಂದ: ಪರಮೇಶ್ವರ್
ಜನವರಿ 26ರಂದು ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಂದಿನ ಕಾರ್ಯಕ್ರಮಗಳ ಬಗ್ಗೆ ಕೂಡ ಚರ್ಚೆ ಆಗಲಿದೆ. ಬಿಜೆಪಿಯ ತಂತ್ರ ಮತ್ತು ಅದಕ್ಕೆ ಕಾಂಗ್ರೆಸ್ ಪ್ರತಿತಂತ್ರದ ಬಗ್ಗೆಯೂ ರಾಜ್ಯ ನಾಯಕರು ಚರ್ಚಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಟಿಕೆಟ್ ವಿತರಣೆ ಬಗ್ಗೆಯೂ ಮಾತುಕತೆ ನಡೆಯಲಿದೆ. ಟಿಕೆಟ್ ಹಂಚಿಕೆ ಇಂದು ಅಂತಿಮವಾಗುವ ಸಾಧ್ಯತೆಯೂ ಇದೆ. ದಿನ ಪೂರ್ತಿ ರಾಹುಲ್ ಜೊತೆ ಸಭೆ ನಡೆಸಲಿರುವ ಮುಖಂಡರು ಸಂಜೆ ಬೆಂಗಳೂರಿಗೆ ಮರಳಲಿದ್ದಾರೆ.
Comments
bengaluru rahul gandhi congress ಬೆಂಗಳೂರು ಸಿದ್ದರಾಮಯ್ಯ ಪರಮೇಶ್ವರ್ ದಿನೇಶ್ ಗುಂಡೂರಾವ್ ರಾಹುಲ್ ಗಾಂಧಿ ಕಾಂಗ್ರೆಸ್ siddaramaiah
English summary
Cm Siddaramaiah, KPCC president Parameshwar, Dinesh Gundu rao went to Delhi to meet AICC president Rahul gandhi. They will discus about state election and plan Rahul visit to Karnataka.
Story first published: Saturday, January 13, 2018, 10:07 [IST]