ಪ್ರವಾಸ ಮುಗಿಸಿ ಬಂದ ಕುಮಾರಸ್ವಾಮಿಗೆ ಬಿಜೆಪಿ ಸ್ವಾಗತ ನೀಡಿದ್ದು ಹೀಗೆ
Recommended Video
ಬೆಂಗಳೂರು, ಜನವರಿ 3: ಐದು ದಿನಗಳ ವಿದೇಶ ಪ್ರವಾಸ ಮುಗಿಸಿ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಮಗ ನಿಖಿಲ್ ಜೊತೆ ಗುರುವಾರ ಬೆಂಗಳೂರಿಗೆ ಮರಳಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ರಾಜ್ಯ ಬಿಜೆಪಿ ವ್ಯಂಗ್ಯದ 'ಸ್ವಾಗತ' ನೀಡಿದೆ.
ಕುಮಾರಸ್ವಾಮಿ ಸಿಂಗಪುರ ಪ್ರವಾಸವನ್ನು ಟೀಕಿಸಿದ ಬಿಜೆಪಿ
ಕುಟುಂಬದೊಂದಿಗೆ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಸರ್ಕಾರ ಮತ್ತು ರಾಜ್ಯ ರಾಜಕೀಯದಲ್ಲಿ ಅನೇಕ ಘಟನೆಗಳು ನಡೆದಿವೆ. ಅವುಗಳನ್ನು ಅಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಕುಮಾರಸ್ವಾಮಿ ಅವರಿಗೆ ಭರ್ಜರಿ ಸ್ವಾಗತದ ಬಾಣಗಳನ್ನು ತೂರಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೇ ನಿಮಗೆ ಸ್ವಾಗತ. ನಿಮ್ಮ ಹೊಸ ವರ್ಷದ ಸಂತೋಷಕೂಟ ಭರ್ಜರಿಯಾಗಿತ್ತು ಎಂದು ಭಾವಿಸುತ್ತೇವೆ ಎಂಬುದಾಗಿ ಬಿಜೆಪಿ ಟ್ವೀಟ್ ಮಾಡಿದೆ.
Welcome back CM @hd_kumaraswamy avare, We hope you had a great new year party,
— BJP Karnataka (@BJP4Karnataka) 3 January 2019
If you are done with new year celebration & tour here is the list of things you need to finish
- Farmers loan waiver
- Steel bridge issue
- Drought relief
- & finally deliver some governance.
ನಿಮ್ಮ
ಹೊಸ
ವರ್ಷದ
ಸಂಭ್ರಮಾಚರಣೆ
ಮತ್ತು
ಪ್ರವಾಸ
ಮುಗಿದಿದ್ದರೆ
ನೀವು
ಮುಗಿಸಬೇಕಿರುವ
ಕೆಲವು
ಕೆಲಸಗಳ
ಪಟ್ಟಿ
ಇಲ್ಲಿದೆ.
-ರೈತರ
ಸಾಲಮನ್ನಾ
-
ಉಕ್ಕಿನ
ಸೇತುವೆ
ವಿವಾದ
-
ಬರ
ಪರಿಹಾರ
-
ಮತ್ತು
ಕೊನೆಯದಾಗಿ
ಸ್ವಲ್ಪವಾದರೂ
ಆಡಳಿತ
ನಡೆಸುವುದು
ಎಂದು
ಬಿಜೆಪಿ
ಲೇವಡಿ
ಮಾಡಿದೆ.
ದಸರೆ ಮುಗಿದು 3 ತಿಂಗಳಾಯ್ತು, ಇನ್ನೂ 12 ಕೋಟಿ ಅನುದಾನ ಬಂದಿಲ್ಲ!
ವಿದೇಶಕ್ಕೆ ತೆರಳಿದ್ದ ಕುಮಾರಸ್ವಾಮಿ ಅವರು ಗುರುವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ದುಬೈನಿಂದ ಬೆಂಗಳೂರಿಗೆ ಮರಳಿದರು.