ಭೂಹಗರಣ, ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ನೀಡಿದ ಬಿಜೆಪಿ
ಬೆಂಗಳೂರು, ಅಕ್ಟೋಬರ್ 16 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 300 ಕೋಟಿ ರು. ಭೂಹಗರಣ ಮಾಡಿದ್ದಾರೆ ಎಂದು ಬಿಜೆಪಿ ಸೋಮವಾರ ಎಸಿಬಿಗೆ ದೂರು ನೀಡಿದೆ.
ಸಿದ್ದರಾಮಯ್ಯ ಮೇಲೆ 300 ಕೋಟಿ ರು ಭೂಹಗರಣ ಹೊರಿಸಿದ ಬಿಜೆಪಿ
ಕರ್ನಾಟಕ ಬಿಜೆಪಿ ಓಬಿಸಿ ಮೋರ್ಚದ ಅಧ್ಯಕ್ಷ ಬಿ. ಜೆ ಪುಟ್ಟಸ್ವಾಮಿ ನೇತೃತ್ವದಲ್ಲಿ ಹಲವು ಬಿಜೆಪಿ ನಾಯಕರು ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗೆ ತೆರಳಿ ದೂರು ನೀಡಿದರು.
ಬೆಂಗಳೂರಿನ ಭೂಪಸಂದ್ರದಲ್ಲಿ ಸರ್ವೇ ನಂಬರ್ 20ರಲ್ಲಿ 6.26 ಎರಕೆಯನ್ನು ಜಮೀನನ್ನು ಸಿದ್ದರಾಮಯ್ಯ ಅವರು 2016ರ ಜೂನ್ ನಲ್ಲಿ ಡಿನೋಟಿಫೈ ಮಾಡಿದ್ದು, ಈ ಹಿನ್ನಲೆಯಲ್ಲಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 42,465, 468 ಮತ್ತು 120(ಬಿ) ಲಂಚ ವಿರೋಧ ಕಾಯ್ದೆ ಹಾಗೂ ಬೇನಾಮಿ ಆಸ್ತಿ ನಿಷೇದ ಕಾಯ್ದೆ ಅದರನ್ವಯ ಪ್ರಕರಣವನ್ನು ಕೂಡಲೇ ದಾಖಲಿಸಿಕೊಳ್ಳಬೇಕೆಂದು ಎಂದು ಬಿಜೆಪಿ ನಗರ ಮತ್ತು ನಗರ ಜಿಲ್ಲೆ ವಕ್ತಾರ ಎನ್.ಆರ್. ರಮೇಶ್ ಎಸಿಬಿಗೆ ಮನವಿ ಮಾಡಿದ್ದಾರೆ..
ಬಿಜೆಪಿಯ ಈ 300 ಕೋಟಿ ರು, ಭೂಹಗರಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಸಗಟವಾಗಿ ತಳ್ಳಿ ಹಾಕಿದ್ದಾರೆ.