ಟ್ವಿಟರ್ ನಲ್ಲಿ ಕಂಬಳಕ್ಕಾಗಿ ಕನ್ನಡಿಗರು ಏನಂದ್ರು?
ಬೆಂಗಳೂರು, ಜನವರಿ 21: ಜಲ್ಲಿಕಟ್ಟು ತಮಿಳುನಾಡಿನಲ್ಲಿ ಬಾರಿ ಕೋಲಾಹಲವನ್ನೇ ಎಬ್ಬಿಸಿದ್ದು, ಅಲ್ಲಿ ನಾಯಕರು, ಚಿತ್ರ ನಟರು, ಸರಕಾರ ಸೇರಿದಂತೆ ಜನರು ಸುಪ್ರೀಂ ವಿರುದ್ಧ ತಮ್ಮ ಬಲ ಪ್ರದರ್ಶನ ಮಾಡಿದ್ದಾರೆ ಹೀಗಾಗಿ ಕರ್ನಾಟಕದ ಸನಾತನ ಕ್ರೀಡೆ ಕಂಬಳಕ್ಕಾಗಿ ಕನ್ನಡಿಗರು ಒಂದಾಗಬೇಕಿದೆ ಎಂದು ನವರಸ ನಾಯಕ ಜಗ್ಗೇಶ್ ಟೀಟ್ ಮಾಡಿದ್ದು ಇದಕ್ಕೆ ಕನ್ನಡಿಗರು ಪ್ರತಿಕ್ರಿಯಿಸಿದ್ದಾರೆ.
ತಮಿಳುನಾಡಿನಲ್ಲಿ ನಟ ಸೂಪರ್ ಸ್ಟಾರ್ ರಜನೀಕಾಂತ್, ಕಮಲ ಹಾಸನ್ ಸೇರಿದಂತೆ ಜಲ್ಲಿಕಟ್ಟು ವಿಚಾರವಾಗಿ ಮೌನ ಮುರಿದು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. ಹೀಗಾಗಿ ನಮ್ಮ ಕರ್ನಾಟಕದ ದಕ್ಷಿಣ ಕನ್ನಡದ ಸನಾತನ ಗ್ರಾಮೀಣ ಕ್ರೀಡೆ ಕಂಬಳದ ಬಗ್ಗೆಯೂ ಕನ್ನಡಿಗರು ಒಗ್ಗಟ್ಟಿನಿಂದ ಹೋರಾಡಬೇಕು ಎಂದು ಜಗ್ಗೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಬಹಳಷ್ಟು ಮಂದಿ ಬೆಂಬಲಿಸಿದ್ದು ಅದನ್ನು ಜಗ್ಗೇಶ್ ಅವರು ರೀ ಟ್ವೀಟ್ ಮಾಡಿದ್ದಾರೆ ಅದರ ಪೂರ್ಣ ಪಾಠ ಇಲ್ಲಿದೆ
ಯಾರುಒಪ್ಪುತ್ತಾರೊ ಬಿಡುತ್ತಾರೊ ನಾನು ದಕ್ಷಿಣಕನ್ನಡದ ಸನಾತನ ಗ್ರಾಮೀಣಕ್ರೀಡೆ #ಕಂಬಳ ಬೇಕುಅಂತ ಕೂಗಾಕುತ್ತೇನೆ.ನಮ್ಮಹಕ್ಕು. ನಮ್ಮ ಪಧ್ಧತಿ.ನಿಲ್ಲಿಸಲು ಯಾರಿಗುಹಕ್ಕಿಲ್ಲಾ
— ನವರಸನಾಯಕ ಜಗ್ಗೇಶ್ (@Jaggesh2) January 20, 2017
#ಕನ್ನಡಿಗರು ಉತ್ತರ ದಕ್ಷಿಣ ಹಳೆಮೈಸೂರು ಅನ್ನದೆ ಅಕಂಡಕರ್ನಾಟಕ ಅಂತ ಒಗ್ಗಟ್ಟಿನಿಂದ ಒಂದಾಗಿಕೂಗಿ!ವಿಶ್ವಕ್ಕೆಕೇಳುವುದು ಕನ್ನಡಿಗನ ಕೂಗು!ಇದಕ್ಕೆ ಬೇಕಿರುವುದು ಸ್ವಾಭಿಮಾನ
— ನವರಸನಾಯಕ ಜಗ್ಗೇಶ್ (@Jaggesh2) January 20, 2017
#ಕಂಬಳ ಕನ್ನಡಿಗರಿಗೆ ಒಗ್ಗಟ್ಟಿನ ಕೊರತೆಇದೆ! ಈಗಲಾದರು ಒಂದಾಗಿ!ಕನ್ನಡಿಗರು ಯಾವುದರಲ್ಲು ಕಮ್ಮಿಯಿಲ್ಲಾ!ಶುರುವಾಗಲಿ ಒಗ್ಗಟ್ಟಿನಮಂತ್ರ!ಒಂದಾಗಿ ಹೋರಾಡಲಿ ನ್ಯಾಯಕ್ಕೆ!
— ನವರಸನಾಯಕ ಜಗ್ಗೇಶ್ (@Jaggesh2) January 20, 2017
ಯಾಕೆ?ತಿಲಾಂಜಲಿ!ಜಲ್ಲಿಕಟ್ಟುವಿನಂತೆ ಕಂಬಳವು ನಮ್ಮ ದಕ್ಷಿಣ ಕರ್ನಾಟಕದ ಸನಾತನ ಕ್ರೀಡೆ.ತಮಿಳರಂತೆ ಒಗ್ಗಟ್ಟಿನ ಮಂತ್ರ ಜಪಿಸಲು ಕೈಜೋಡಿಸಿ ಇಡಿವಿಶ್ವದ ಕನ್ನಡಿಗರು ಒಂದಾಗಿ👍 https://t.co/2DizJDYHEJ
— ನವರಸನಾಯಕ ಜಗ್ಗೇಶ್ (@Jaggesh2) January 20, 2017
@Jaggesh2 anna let's start online campaign. Even we can achieve this.. pic.twitter.com/A6KWMbVWTW
— ಟ್ರೋಲ್ ಹೈಕ್ಳು (@TrollHaiklu) January 21, 2017
Animal Welfare Board of India wow just wow#weneedkambala pic.twitter.com/N9I8GKP12R
— ಟ್ರೋಲ್ ಹೈಕ್ಳು (@TrollHaiklu) January 21, 2017