ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈತ್ರಿ ಪ್ರಕಾಶನದಿಂದ ಸಂಕಲನಕ್ಕಾಗಿ ಸಣ್ಣಕಥಾ ಸ್ಪರ್ಧೆ

By Prasad
|
Google Oneindia Kannada News

ಬೆಂಗಳೂರು, ಫೆಬ್ರವರಿ 20 : ಹೊಸದಾಗಿ ಆರಂಭವಾಗಿರುವ "ಮೈತ್ರಿ" ಪ್ರಕಾಶನವು "ಧ್ವನಿಗಳು" ಎಂಬ ಕಥಾಸಂಕಲನ ಹೊರತರಲಿದ್ದು, ಉತ್ಸಾಹಿ ಕನ್ನಡ ಕಥೆಗಾರರಿಗಾಗಿ ಸಣ್ಣಕಥಾ ಸ್ಪರ್ಧೆಯನ್ನು ಏರ್ಪಡಿಸಿದೆ. ಸ್ಪರ್ಧೆಯಲ್ಲಿ ಗೆದ್ದವರಿಗೆ ಆಕರ್ಷಕ ಬಹುಮಾನಗಳೂ ಇವೆ.

ಆಸಕ್ತರು ಕಥೆಯನ್ನು ಕಳಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಆಯ್ಕೆಯಾಗಿರುವ ಕಥೆಗಳು ಕಥಾಸಂಕಲನದಲ್ಲಿಯೂ ಪ್ರಕಟವಾಗಲಿವೆ. ಕಥೆಯನ್ನು ಯಾರು ಬೇಕಾದರೂ ಕಳಿಸಬಹುದು. ವಯಸ್ಸಿನ ಮಿತಿ ಇಲ್ಲ. ನಿಮ್ಮ ಕಥಾನೈಪುಣ್ಯತೆಯನ್ನು ಸವಾಲಿಗೆ ಒಡ್ಡಿ. [ಸಣ್ಣಕಥೆ : ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]

Kannada Short story competition by Mythri Publication

ನಿಯಮಗಳು ಹೀಗಿವೆ

* ಕತೆ ಸ್ವಂತದ್ದಾಗಿದ್ದು ಅನುವಾದ, ಆಧಾರ ಇರಕೂಡದು ಅಂತೆಯೇ ಹಿಂದೆ ಎಲ್ಲೂ ಪ್ರಕಟಣೆಗೊಂಡಿರಬಾರದು.

* ಕತೆ ಫುಲ್ ಸ್ಕೇಪ್ ಪುಟದಲ್ಲಿ ಹತ್ತು ಪುಟ ಮೀರದಂತೆ,ಮತ್ತು 3,000 ಪದ ಮೀರದಂತಿರಬೇಕು.

* ಇದು ಒಂದು ಕಥಾ ಸ್ಫರ್ಧೆಯಾಗಿದ್ದರಿಂದ ತೀರ್ಪುಗಾರರ ತೀರ್ಮಾನವೇ ಅಂತಿಮ.

ಆಕರ್ಷಕ ಬಹುಮಾನ : ಮೊದಲ ಬಹುಮಾನ ರೂ. 5,000, ಎರಡನೇ ಬಹುಮಾನ ರೂ. 3,000 ಮತ್ತು ಮೂರನೇ ಬಹುಮಾನ ರೂ. 2,000.

ಕಡೆಯ ದಿನಾಂಕ : ಒಟ್ಟು 15 ಕತೆಗಳ ಸಂಕಲನ ಇದಾಗಲಿದ್ದು, ಆಯ್ಕೆಯಾದ ಕತೆಗಳನ್ನು "ಮೈತ್ರಿ" ಸಂಕಲನರೂಪದಲ್ಲಿ ತರಲಿದೆ. ಕತೆ ಕಳಿಸಲು ಅಂತಿಮ ದಿನಾಂಕ 15ನೇ ಮಾರ್ಚ್, 2016.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ
ಈಮೇಲ್ :
[email protected]

ಕತೆ ಕಳಿಸುವ ವಿಳಾಸ
ಮೈತ್ರಿ ಪ್ರಕಾಶನ.
c/o ಉಮೇಶ್ ದೇಸಾಯಿ
504, ಎರಡನೇ ಅಡ್ಡರಸ್ತೆ, ಎರಡನೇ ಬ್ಲಾಕ್
ಬಿಎಸ್ ಕೆ ಮೊದಲನೇ ಸ್ಟೇಜ್
ಬೆಂಗಳೂರು - 560 050
ಮೊಬೈಲ್ : 7411307748 [ವಿಶೇಷ ಕಥೆ : ಟಪ್ ಟಪ್ ಬುದ್ಧಿಸ್ಟ್ ಸೆಂಟರ್ (ಭಾಗ 1)]

English summary
Mythri Publication has invited writers to send Kannada short story for bringing out short story collection and also for competition. If you want to win attractive prize and you want your story to be published in collection send short story before 15th March, 2016. All the best.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X