ನ.1ರ ರಾಜ್ಯೋತ್ಸವ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ ಮಲ್ಲೇಶ್ವರ
ಬೆಂಗಳೂರು, ಅಕ್ಟೋಬರ್ 23: ಇನ್ನು ಕೆಲವೇ ದಿನಗಳಲ್ಲಿ ಕನ್ನಡ ಮಾಸ ಆರಂಭವಾಗಲಿದೆ. ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ಈಗಾಗಲೇ ಉದ್ಯಾನನಗರಿ ಸಿಂಗರಿಸಿಕೊಂಡಿದ್ದು, ಬೆಂಗಳೂರಿನ ಮಲ್ಲೇಶ್ವರ ಸಾಂಸ್ಕೃತಿಕ ಮೆರವಣಿಗೆಗೆ ಸಜ್ಜಾಗಿದೆ.
ಕರ್ನಾಟಕದ ಜನರಲ್ಲಿ ಕನ್ನಡದ ಜಾಗೃತಿ, ಅಸ್ಮಿತೆಯನ್ನು ಮೂಡಿಸಿದ 1982 ರ ಗೋಕಾಕ್ ಚಳವಳಿಯ ಸ್ಮರಣೆಗಾಗಿ ಈ ಬಾರಿಯ ನವೆಂಬರ್ ಮೊದಲ ದಿನವನ್ನು(92 ನೇ ಕನ್ನಡ ರಾಜ್ಯೋತ್ಸವ) ಮೀಸಲಿಡಲು ನಿರ್ಧರಿಸಲಾಗಿದೆ ಎಂದು ಮಲ್ಲೇಶ್ವರ ಶಾಸಕ ಸಿ.ಎನ್.ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಕನ್ನಡದಲ್ಲೇ ನಾಮಫಲಕಕ್ಕೆ ಕೊನೆಗೂ ಕಾನೂನು ರೂಪಿಸಲು ನಿರ್ಧಾರ
ನವೆಂಬರ್ 1 ರ, ಗುರುವಾರ ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರ ಆಟದ ಮೈದಾನದಿಂದ, ಸಂಪಿಗೆ ರಸ್ತೆಯ ಮೂಲಕ ಸಿಇಟಿ ಸೆಲ್ ಬಳಿ ಇರುವ ವೃತ್ತದವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ. ಇದರೊಟ್ಟಿಗೆ ಮಲ್ಲೇಶ್ವರ 18 ನೇ ಅಡ್ಡರಸ್ತೆಯ ಸಿಇಟಿ ಸೆಲ್ ಎದುರಿನ ವೃತ್ತಕ್ಕೆ 'ಗೋಕಾಕ್ ಚಳವಳಿ ಸ್ಮರಣಾರ್ಥ' ವೃತ್ತ ಎಂದು ಹೆಸರಿಟ್ಟು, ಈ ವೃತ್ತವನ್ನು ಇದೇ ದಿನ ಲೋಕಾರ್ಪಣೆಗೊಳಿಸಲಾಗುತ್ತಿದೆ. ಗೋಕಾಕ್ ಚಳವಳಿಯ ಹರಿಕಾರ, ಕನ್ನಡದ ವರನಟ ಡಾ.ರಾಜಕುಮಾರ್ ಅವರ ಪುತ್ಥಳಿಯನ್ನು ಅನಾವರಣಗೊಳಿಸಲಾಗುತ್ತಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಗೋಕಾಕ್ ಚಳುವಳಿ ಸ್ಮರಣಾರ್ಥ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ಮಲ್ಲೇಶ್ವರಂನ 18ನೇ ಅಡ್ಡರಸ್ತೆಯಲ್ಲಿ 'ಗೋಕಾಕ್ ಚಳುವಳಿ ಸ್ಮರಣಾರ್ಥ ವೃತ್ತ' ದ ಲೋಕಾರ್ಪಣೆ ಮತ್ತು ವರನಟ ಡಾ. ರಾಜ್ ಕುಮಾರ್ ರವರ ಪುತ್ಥಳಿ ಅನಾವರಣ ಕಾರ್ಯಕ್ರಮ.
— Dr. Ashwathnarayan (@drashwathcn) October 22, 2018
ಸ್ಥಳ: ಸಿಇಟಿ ಸೆಲ್ ಬಳಿ, 18 ನೇ Cross, ಮಲ್ಲೇಶ್ವರಂ
ದಿನಾಂಕ: Nov 1 | 11 AM pic.twitter.com/VlRG4EkGf1
ಕನ್ನಡ ಕಲಿಕೆ ಬಗ್ಗೆ ಅಭಿಮಾನ ಇರಲಿ, ಅಂಧಾಭಿಮಾನವಲ್ಲ: ಭೋಜೆ ಗೌಡ
ಈ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಮತ್ತು ತಂಡದವರು ಸಂಗಿತ ಸುಧೆ ಹರಿಸಲಿದ್ದು, ಗೋಕಾಕ್ ಚಳವಳಿ ಕುರಿತು ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಸಹೃದಯ ಕನ್ನಡಾಭಿಮಾನಿಗಳು ಬಂದು ಈ ಕನ್ನಡದ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಬೇಕಾಗಿ ಶಾಸಕ ಅಶ್ವತ್ಥನಾರಾಯಣ್ ಅವರು ಕೋರಿದ್ದಾರೆ.
1982 ರಲ್ಲಿ ಸಾಮಾನ್ಯ ಜನತೆಯಲ್ಲೂ ಕನ್ನಡ ಜಾಗೃತಿ ಮೂಡಿಸಿದ್ದ ಗೋಕಾಕ್ ಚಳುವಳಿ, ಡಾ. ರಾಜ್ ಕುಮಾರ್ ರವರ ಮುಂದಾಳತ್ವದ ಪಾಲ್ಗೊಳ್ಳುವಿಕೆಯಿಂದ ಮನೆ ಮನೆಗೂ ತಲುಪುವಂತಾಗಿತ್ತು. ಈ ಯಶಸ್ವಿ ಚಳುವಳಿಯನ್ನು ಮೆಲುಕು ಹಾಕಿ, ಕನ್ನಡದ ವೈಭವದ ಚರಿತ್ರೆಯ ಪುಟವನ್ನು ಇಂದಿನ ಜನಾಂಗಕ್ಕೆ ಪರಿಚಯಿಸಬೇಕಿದೆ.#KannadaRajyotsava #Kannada #DrRajkumar pic.twitter.com/GHmtUjQiI5
— Dr. Ashwathnarayan (@drashwathcn) October 22, 2018
ಕನ್ನಡ ಆಡಳಿತ ಭಾಷೆಯಾಗಲು ಕುಮಾರಣ್ಣನ ದಿಟ್ಟ ಹೆಜ್ಜೆ
ಗೋಕಾಕ್
ಚಳವಳಿಯ
ಮಹತ್ವವನ್ನು
ಕಿರುವಿಡಿಯೋ
ಮೂಲಕ
ತಿಳಿಸಿರುವ
ಅಶ್ವತ್ಥನಾರಾಯಣ್
ಅವರು
"1982
ರಲ್ಲಿ
ಸಾಮಾನ್ಯ
ಜನತೆಯಲ್ಲೂ
ಕನ್ನಡ
ಜಾಗೃತಿ
ಮೂಡಿಸಿದ್ದ
ಗೋಕಾಕ್
ಚಳುವಳಿ,
ಡಾ.
ರಾಜ್
ಕುಮಾರ್
ರವರ
ಮುಂದಾಳತ್ವದ
ಪಾಲ್ಗೊಳ್ಳುವಿಕೆಯಿಂದ
ಮನೆ
ಮನೆಗೂ
ತಲುಪುವಂತಾಗಿತ್ತು.
ಈ
ಯಶಸ್ವಿ
ಚಳುವಳಿಯನ್ನು
ಮೆಲುಕು
ಹಾಕಿ,
ಕನ್ನಡದ
ವೈಭವದ
ಚರಿತ್ರೆಯ
ಪುಟವನ್ನು
ಇಂದಿನ
ಜನಾಂಗಕ್ಕೆ
ಪರಿಚಯಿಸಬೇಕಿದೆ"
ಎಂದು
ಟ್ವೀಟ್
ಮಾಡಿದ್ದಾರೆ.
ನ.1 ರ ಕಾರ್ಯಕ್ರಮದಲ್ಲಿ ವಿವಿಧ ಸಾಹಿತಿಗಳು, ನಟರು ಸೇರಿದಂತೆ ಖ್ಯಾತನಾಮರು ಭಾಗವಹಿಸಲಿದ್ದಾರೆ.