ಶನಿವಾರ ಬೆಂಗಳೂರಿನಲ್ಲಿ ಉದ್ಯೋಗ ಮೇಳ
ಬೆಂಗಳೂರು, ಮೇ 20 : ಪಿ.ರಮೇಶ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನಲ್ಲಿ ಮೇ 21ರಂದು ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಶನಿವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಯೋಗ ಮೇಳಕ್ಕೆ ಚಾಲನೆ ನೀಡಲಿದ್ದಾರೆ.
ಸಿ.ವಿ.ರಾಮನ್
ನಗರ
ವಿಧಾನಸಭಾ
ಕ್ಷೇತ್ರದ
ಹಲಸೂರು
ಅಂಬೇಡ್ಕರ್
ಕ್ರೀಡಾಂಗಣದಲ್ಲಿ
ಮೇ
21ರಂದು
ಬೃಹತ್
ಉದ್ಯೋಗ
ಮೇಳವನ್ನು
ಆಯೋಜಿಸಲಾಗಿದೆ.
ಗೃಹ
ಸಚಿವ
ಪರಮೇಶ್ವರ,
ಕೈಗಾರಿಕಾ
ಸಚಿವ
ಆರ್.ವಿ.ದೇಶಪಾಂಡೆ,
ಬೆಂಗಳೂರು
ಅಭಿವೃದ್ದಿ
ಸಚಿವ
ಕೆ.ಜೆ.ಜಾರ್ಜ್
ಅವರು
ಉದ್ಘಾಟನಾ
ಸಮಾರಂಭದಲ್ಲಿ
ಪಾಲ್ಗೊಳ್ಳಲಿದ್ದಾರೆ.
[ಇಸ್ರೋದಲ್ಲಿ
ವಿಜ್ಞಾನಿ/ಇಂಜಿನಿಯರ್
ಹುದ್ದೆಗೆ
ಸ್ಪರ್ಧಾತ್ಮಕ
ಪರೀಕ್ಷೆ]
ಇನ್ಫೋಸಿಸ್, ವಿಪ್ರೋ, ಫ್ಲಿಪ್ಕಾರ್ಟ್ ಸೇರಿದಂತೆ 150 ಕ್ಕೂ ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು, ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಿದೆ. 10 ಸಾವಿರಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ನೀಡುವ ಗುರಿ ಹೊಂದಲಾಗಿದೆ.
ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು www.cvramannagarcongress.com ವೆಬ್ಸೈಟ್ಗೆ ಲಾಗ್ಇನ್ ಆಗಿ ಹೆಸರು ನೋಂದಾಯಿಸಿಕೊಳ್ಳಬಹುದು.
ಉದ್ಯೋಗವಕಾಶಗಳು
* ಕಲಬುರಗಿ ಜಿಲ್ಲಾ ಪಂಚಾಯಿತಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಿದೆ. ಮೇ 21ರಂದು ಹುದ್ದೆಗಳ ನೇಮಕಾತಿಗೆ ನೇರ ಸಂದರ್ಶನ ನಡೆಯಲಿದೆ. [ವಿವರಗಳು ಇಲ್ಲಿವೆ]
* ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವಿಜಯಪುರ ಹಲವಾರು ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿಗಳನ್ನು ಸಲ್ಲಿಸಲು ಜೂನ್ 20, 2016. [ಹೆಚ್ಚಿನ ಮಾಹಿತಿ ಇಲ್ಲಿದೆ]