ನಂದಿಬೆಟ್ಟದ ರೆಸಾರ್ಟ್ನಲ್ಲಿ ಜೆಡಿಎಸ್ ಶಾಸಕರ ಬೀಡು
ಬೆಂಗಳೂರು, ಮೇ 21: ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕ್ಷಣ ಹತ್ತಿರ ಬರುತ್ತಿದ್ದಂತೆಯೇ ಜೆಡಿಎಸ್ನ ಶಾಸಕರನ್ನು ಮತ್ತೆ ರೆಸಾರ್ಟ್ಗೆ ಕರೆದೊಯ್ಯಲಾಗಿದೆ.
ಇನ್ನೂ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯದ ಕಾರಣ, ಈ ಅವಧಿಯಲ್ಲಿ ಬಿಜೆಪಿಯು ತನ್ನ ಶಾಸಕರನ್ನು ಸೆಳೆದುಕೊಳ್ಳಬಹುದು ಎಂಬ ಭಯದೊಂದಿಗೆ ಕಾಂಗ್ರೆಸ್ ಮತ್ತು ಜೆಡಿಎಸ್, ಗುರುವಾರ ನಡೆಯಲಿರುವ ವಿಶ್ವಾಸಮತ ಪ್ರಕ್ರಿಯೆಯವರೆಗೂ ಶಾಸಕರನ್ನು ಬೇರೆಯವರೊಂದಿಗೆ ಸಂಪರ್ಕ ಹೊಂದದಂತೆ ಮಾಡುವ ಪ್ರಯತ್ನ ನಡೆಸಿವೆ.
ಅಧಿಕಾರ ಹಂಚಿಕೆ ವರದಿ ಊಹಾಪೋಹ: ಕುಮಾರಸ್ವಾಮಿ
ದೇವನಹಳ್ಳಿಯ ನಂದಿಬೆಟ್ಟದ ಬಳಿಯಿರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ಗೆ ಭಾನುವಾರ ರಾತ್ರಿಯೇ ಶಾಸಕರನ್ನು ಕರೆದೊಯ್ಯಲಾಗಿದೆ. ಒಟ್ಟು 30 ರೂಮ್ಗಳನ್ನು ಶಾಸಕರಿಗಾಗಿ ಬುಕ್ ಮಾಡಲಾಗಿದೆ. ಅವರ ಕುಟುಂಬದ ಸದಸ್ಯರೂ ಅವರನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.
ರೆಸಾರ್ಟ್ ಸುತ್ತಲೂ ಬಿಗಿಭದ್ರತೆ ಕಲ್ಪಿಸಲಾಗಿದ್ದು, ಬೆಂಬಲಿಗರು ಮತ್ತು ಶಾಸಕರ ಆಪ್ತರು ಸೇರಿದಂತೆ ಹೊರಗಿನಿಂದ ಬರುತ್ತಿರುವ ಯಾರಿಗೂ ಒಳಗೆ ಪ್ರವೇಶ ನೀಡುತ್ತಿಲ್ಲ.
ಕುಮಾರಸ್ವಾಮಿ
ಕಾರ್ಯಕ್ರಮ
ಬದಲು
ಕುಮಾರಸ್ವಾಮಿ
ಅವರು
ಸೋಮವಾರ
ಬೆಳಿಗ್ಗೆ
ಹಾಸನದ
ವಿವಿಧ
ದೇವಸ್ಥಾನಗಳಿಗೆ
ತೆರಳಿ
ಪೂಜೆ
ಸಲ್ಲಿಸಿ
ಅಲ್ಲಿಂದ
ನೇರವಾಗಿ
ಸೋನಿಯಾ
ಗಾಂಧಿ
ಮತ್ತು
ರಾಹುಲ್
ಗಾಂಧಿ
ಅವರ
ಭೇಟಿಗೆ
ದೆಹಲಿಗೆ
ತೆರಳುವ
ಕಾರ್ಯಕ್ರಮವಿತ್ತು.
ಕಾಂಗ್ರೆಸ್-ಜೆಡಿಎಸ್ ಸರ್ಕಾರ: ಕಗ್ಗಂಟಾಗಲಿದೆಯೇ ಖಾತೆ ಹಂಚಿಕೆ?
ಅದರಲ್ಲಿ ಬದಲಾವಣೆ ಮಾಡಲಾಗಿದ್ದು, ತವರಿನಲ್ಲಿ ಪೂಜೆ ಸಲ್ಲಿಸಿದ ಬಳಿಕ ನಂದಿಬೆಟ್ಟದ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿರುವ ಜೆಡಿಎಸ್ ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಅವರು ಬೆಳಿಗ್ಗೆ 11 ಗಂಟೆಗೆ ರೆಸಾರ್ಟ್ಗೆ ತೆರಳಲಿದ್ದಾರೆ. ಅಲ್ಲಿ ಸಭೆ ನಡೆಸಿದ ಬಳಿಕ ನೇರವಾಗಿ ದೆಹಲಿಗೆ ಪ್ರಯಾಣಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್
ಶಾಸಕರೂ
ಹೋಟೆಲ್ನಲ್ಲಿ
ಕಾಂಗ್ರೆಸ್
ಕೂಡ
ತನ್ನ
ಶಾಸಕರನ್ನು
ಹೋಟೆಲ್ನಲ್ಲಿ
ಇರಿಸಿದ್ದು,
ಗುರುವಾರದವರೆಗೂ
ಅವರು
ಅಲ್ಲಿಯೇ
ಠಿಕಾಣಿ
ಹೂಡುವ
ಸಾಧ್ಯತೆ
ಇದೆ.
ಬೆಂಗಳೂರಿನ ಹಿಲ್ಟನ್ ಹೋಟೆಲ್ನಲ್ಲಿ ಶಾಸಕರಿಗೆ ಸೌಲಭ್ಯ ಕಲ್ಪಿಸಲಾಗಿದೆ. ಶಾಸಕರ ಕುಟುಂಬಸ್ಥರನ್ನು ಅಲ್ಲಿಗೇ ಕರೆಯಿಸಲು ವ್ಯವಸ್ಥೆ ಮಾಡಲಾಗಿದೆ. ಹೋಟೆಲ್ಗೆ ಬರುವ ಪ್ರತಿ ವಾಹನವನ್ನೂ ತಪಾಸಣೆ ನಡೆಸಲಾಗುತ್ತಿದೆ.