ಜಿ.ಪ್ರಸಾದ್ ರೆಡ್ಡಿ ಮನೆಯಲ್ಲಿ 3ನೇ ದಿನವೂ ಐಟಿ ಶೋಧ
ಬೆಂಗಳೂರು, ಆಗಸ್ಟ್ 02 : ಬಿಜೆಪಿ ಮುಖಂಡ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಜಿ.ಪ್ರಸಾದ್ ರೆಡ್ಡಿ ಅವರ ಮನೆ ಮತ್ತು ಕಚೇರಿಯಲ್ಲಿ 3ನೇ ದಿನವೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.
ಅವಿನಾಶ್ ಅಮರಲಾಲ್ ಕುಕ್ರೇಜ ಅವರ ವ್ಯವಹಾರದಲ್ಲಿ ಜಿ.ಪ್ರಸಾದ್ ರೆಡ್ಡಿ ಅವರು ಪಾಲುದಾರರು ಎಂದು ತಿಳಿದುಬಂದಿದ್ದು, ಈ ಹಿನ್ನಲೆಯಲ್ಲಿ ಅವರ ಕಚೇರಿ ಮತ್ತು ನಿವಾಸದ ಮೇಲೆ ಸೋಮವಾರ ದಾಳಿ ನಡೆದಿತ್ತು.
ತಮಿಳುನಾಡಿನಲ್ಲಿ ಬೃಹತ್ ಐಟಿ ದಾಳಿ, 160 ಕೋಟಿ ರು ವಶ
ಬೌರಿಂಗ್ ಇನ್ಸ್ಟಿಟ್ಯೂಟ್ನ ಮೂರು ಲಾಕರ್ಗಳಲ್ಲಿ ಬಚ್ಚಿಡಲಾಗಿದ್ದ ಹಣ, ಆಭರಣ ಮತ್ತು ಜಮೀನು ಪತ್ರಗಳನ್ನು ವಶಪಡಿಸಿಕೊಂಡಿರುವ ಐಟಿ ಇಲಾಖೆ ಅಧಿಕಾರಿಗಳು ಬಳಿಕ ಉದ್ಯಮಿ ಜಿ.ಪ್ರಸಾದ್ ರೆಡ್ಡಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದರು.
ಬೌರಿಂಗ್ ಲಾಕರ್ ಪ್ರಕರಣ: ಸಿಸಿಟಿವಿ ಪರಿಶೀಲಿಸುತ್ತಿರುವ ಐಟಿ ಅಧಿಕಾರಿಗಳು
ಸೋಮವಾರ 30 ಕ್ಕೂ ಹೆಚ್ಚು ಅಧಿಕಾರಿಗಳು ಪ್ರಸಾದ್ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿದ್ದರು. 3 ದಿನವೂ ಪರಿಶೀಲನೆ ಮುಂದುವರೆಸಿದ್ದಾರೆ. ಯಶವಂತಪುರದಲ್ಲಿರುವ ಪ್ರಸಾದ್ ರೆಡ್ಡಿ ಅವರ ಕಚೇರಿಯಲ್ಲಿ ಬುಧವಾರ ಪರಿಶೀಲನೆ ನಡೆಸಲಾಯಿತು.
ಪ್ರಸಾದ್ ರೆಡ್ಡಿ ಅವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ಅವಿನಾಶ್ ಹಾಗೂ ಅವರ ತಂದೆ ಒಡೆತನದ 'ಅನುಷ್ಕಾ ಎಸ್ಟೇಟ್ಸ್'ಗೆ ಮಾರಾಟ ಮಾಡಿದ್ದಾರೆ ಎಂಬುವುದಕ್ಕೆ ಲಾಕರ್ನಲ್ಲಿ ದಾಖಲೆಗಳು ಸಿಕ್ಕಿವೆ. ಆದ್ದರಿಂದ, ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.