ಐಟಿ ಅಧಿಕಾರಿ ಪುತ್ರ ಶರತ್ ಹತ್ಯೆಯ ಪ್ರಮುಖ ಆರೋಪಿ ಬಂಧನ
ಬೆಂಗಳೂರು, ಸೆಪ್ಟೆಂಬರ್ 25 : ಆದಾಯ ತೆರಿಗೆ ಅಧಿಕಾರಿ ಪುತ್ರ ಶರತ್ ಹತ್ಯೆಯ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶರತ್ ಕೊಲೆ ಕೇಸ್ ಗೆ ಟ್ವಿಸ್ಟ್: ಸ್ನೇಹಿತನಿಂದಲೇ ಅಪಹರಣ, ಹತ್ಯೆ
The prime accused has been has been nabbed in #SharathKidnap & murder case. The Police have arrested Shanthakumar alias Shantha in #Majestic pic.twitter.com/q1kAjXkQtQ
— NEWS9 (@NEWS9TWEETS) September 25, 2017
ಶರತ್ ಅಪಹರಣ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಶಾಂತಕುಮಾರ್ ಅಲಿಯಾಸ್ ಶಾಂತನನ್ನು ಇಂದು (ಸೆಪ್ಟೆಂಬರ್ 25) ನಗರದ ಕೆಂಪೇಗೌಡ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. ಇದೇ ಪ್ರಕರಣದಲ್ಲಿ ಈಗಾಗಲೇ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.
ಸೆ.12ರಂದು ಶರತ್ ನನ್ನು ಅಪಹರಣ ಮಾಡಿದ್ದ ಆರೋಪಿಗಳು ಅಂದೇ ಶರತ್ ಪೋಷಕರಿಗೆ 50 ಲಕ್ಷ ರು. ಹಣ ನೀಡುವಂತೆ ಮತ್ತು ಪೊಲೀಸರಿಗೆ ದೂರು ನೀಡದಂತೆ ವಿಡಿಯೋ ಕಳಿಸಿದ್ದರು. ಆದರೆ, ಶರತ್ ತಂದೆ ಪೊಲೀಸರಿಗೆ ದೂರು ನೀಡಿದ ವಿಚಾರ ತಿಳಿದ ತಕ್ಷಣ ಶರತ್ ನನ್ನು ಹತ್ಯೆ ಮಾಡಿದ್ದರು.