ರಾಜ್ಯದಲ್ಲಿ ಪೊಲೀಸ್ ಇಲಾಖೆ ಹೆಚ್ಚು ಭ್ರಷ್ಟವೇ?
ಬೆಂಗಳೂರು, ನ. 27: ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆಯುತ್ತಿದೆ. ಈ ವರ್ಷ ನವೆಂಬರ್ 25ರ ವರೆಗೆ 843 ನಾಗರಿಕರು ಸುಮಾರು 8.67 ಕೋಟಿ ರೂ.ಗಳಷ್ಟು ಹಣವನ್ನು ಖಾಕಿಧಾರಿಗಳಿಗೆ ನೀಡಿದ್ದಾರೆ.
ಈ ವಿಷಯ ipaidabribe ಎಂಬ ವೆಬ್ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ. ಈ ವೆಬ್ ಸೈಟ್ನಲ್ಲಿ ಅನೇಕರು ತಾವು ಲಂಚ ನೀಡಿದ ಇಲಾಖೆಗಳಲ್ಲಿ ಪೊಲೀಸ್ ಇಲಾಖೆಯ ಹೆಸರನ್ನು ಹೆಚ್ಚು ಹೇಳಿದ್ದಾರೆ. [ಬೆಳಗಾವಿಯಲ್ಲಿ ಪೊಲೀಸರಿಗೆ ಒಂದು ದಿನ]
ರಾಜ್ಯದ 37 ಇಲಾಖೆಗಳು ಹಾಗೂ ಸೇವಾ ಸಂಸ್ಥೆಗಳನ್ನು ಭ್ರಷ್ಟಾಚಾರ ಕುರಿತು ಸಮೀಕ್ಷೆ ನಡೆಸಲು ಹೆಸರಿಸಲಾಗಿತ್ತು. ಈ ಸಮೀಕ್ಷೆಯಲ್ಲಿ ಭಾಗವಹಿಸಿದ 1,062 ಜನರು ಒಟ್ಟು 3.75 ಕೋಟಿ ರೂ.ಗಳನ್ನು ಪೊಲೀಸರಿಗೆ ಲಂಚವಾಗಿ ನೀಡಿರುವುದಾಗಿ ಹೇಳಿಕೊಂಡಿದ್ದಾರೆ. 7,148 ಜನ 2010ರ ವರೆಗೆ ಪೊಲೀಸರಿಗೆ ಸುಮಾರು 15.12 ಕೋಟಿ ರೂ. ನೀಡಿರುವುದಾಗಿ ತಿಳಿಸಿದ್ದಾರೆ. [ಎಸ್ಎಂಎಸ್ ಮೂಲಕ ದೂರು ನೀಡಿ]
ಸಾರಿಗೆ ಇಲಾಖೆಗೆ 2ನೇ ಸ್ಥಾನ: ಲಂಚ ಪಡೆಯುವುದರಲ್ಲಿ ಸಾರಿಗೆ ಇಲಾಖೆಗೆ ಭ್ರಷ್ಟಾಚಾರದಲ್ಲಿ ಎರಡನೇ ಸ್ಥಾನ ಸಿಕ್ಕಿದೆ. 261 ಜನ ಈ ವರ್ಷ ತಾವು ಅಧಿಕಾರಿಗಳಿಗೆ 3.12 ಲಕ್ಷ ರೂ.ಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ. ipaidabribe ವೆಬ್ ಸೈಟ್ ಆರಂಭವಾದ ಮೇಲೆ 1,777 ಜನ ಹಣ ನೀಡಿದ್ದನ್ನು ಹೇಳಿಕೊಂಡಿದ್ದು, ಈ ಮೊತ್ತ 58.28 ಲಕ್ಷ ರೂ. ಆಗುತ್ತದೆ.
ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹಾಗೂ ಸೀಮಾ ಸುಂಕ ಮತ್ತು ಅಬಕಾರಿ ಇಲಾಖೆಗಳು ಕಡಿಮೆ ಭ್ರಷ್ಟಾಚಾರ ಅಂಶ ದಾಖಲಿಸಿವೆ. [20 ಪೊಲೀಸರಿಗೆ ರಾಷ್ಟ್ರಪತಿ ಪದಕ]
ಮತ್ತೆ ಕರ್ನಾಟಕಕ್ಕೆ ಪ್ರಥಮ ಸ್ಥಾನ: ಆದರೆ, ದೇಶದಲ್ಲಿಯೇ ಕರ್ನಾಟಕವು ಸತತ ಎರಡನೇ ಬಾರಿಗೆ ಅತ್ಯಂತ ಭ್ರಷ್ಟ ರಾಜ್ಯವಾಗಿ ಗುರುತಿಸಿಕೊಂಡಿದೆ. ನಂತರದ ಸ್ಥಾನಗಳಲ್ಲಿ ಮಹಾರಾಷ್ಟ್ರ, ಆಂದ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿವೆ.
2001ರಲ್ಲಿ ಆರಂಭ: 2001ರಲ್ಲಿ ರಮೇಶ್ ರಾಮನಾಥನ್ ಹಾಗೂ ಸ್ವಾತಿ ರಾಮನಾಥನ್ ಅವರಿಂದ ಆರಂಭವಾದ ಜನಾಗ್ರಹ ವೇದಿಕೆ ಸಾರ್ವಜನಿಕರಿಗೆ ಆಡಳಿತದಲ್ಲಿನ ಲೋಪ ದೋಷಗಳನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡುತ್ತಿದೆ. ಆಡಳಿತದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಹೆಚ್ಚು ಒತ್ತು ನೀಡುವ ಜನಾಗ್ರಹ, ಈಗ ವೆಬ್ ಸೈಟ್ [http://ipaidabribe.com/]ಮೂಲಕ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ಆರಂಭಿಸಿದ್ದರು. [ಭ್ರಷ್ಟರ ವಿರುದ್ಧ ಜನಾಗ್ರಹ ಹೋರಾಟ]
ಇದೇ ಐಡಿಯಾ ಬಳಸಿಕೊಂಡು ಜನಾಗ್ರಹ ಆರಂಭಿಸಿದ್ದ 'I Paid a Bribe' ಮಾದರಿಯಲ್ಲೇ "I Made a Bribe" ಎಂಬ ವೆಬ್ ಆಂದೋಲನವನ್ನು ಚೀನಿಯರು ಶುರು ಮಾಡಿದ್ದರು. ಪ್ರಜಾಪ್ರಭುತ್ವ ಆಧಾರಿತ ಈ ಹೋರಾಟ ಕಮ್ಯೂನಿಸ್ಟ್ ದೇಶಕ್ಕೆ ರಫ್ತು ಆಗುತ್ತಿರುವುದು ಸಂತೋಷದ ವಿಷಯ ಎಂದು ಜನಾಗ್ರಹದ ವೆಬ್ ಸಂಚಾಲಕ ಟಿಆರ್ ರಘುನಂದನ್ ಪ್ರತಿಕ್ರಿಯಿಸಿದ್ದರು.