ಸರ್ಕಾರದ ವಿರುದ್ಧ ಐಪಿಎಸ್ ಅಧಿಕಾರಿಗಳು ಗರಂ, ರತ್ನಪ್ರಭಾಗೆ ಪತ್ರ
ಬೆಂಗಳೂರು, ಮಾರ್ಚ್ 12: ರಾಜಕೀಯ ಹಸ್ತಕ್ಷೇಪದಿಂದ ಪೊಲೀಸ್ ಇಲಾಖೆ ಬಗ್ಗೆ ಅಪನಂಬಿಕೆ ಪ್ರಾರಂಭವಾಗಿದೆ ಎಂದು ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಎಜಿಡಿಪಿ ಆರ್.ಪಿ.ಶರ್ಮಾ ಅವರು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ಖಾರವಾಗಿ ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಅಧಿಕಾರಿಗಳ ಬೇಕಾಬಿಟ್ಟಿ ವರ್ಗಾವಣೆ, ಅಧಿಕಾರಿಗಳ ಮೇಲೆ ಹಲ್ಲೆ, ವಿದ್ವತ್ ಪ್ರಕರಣ, ಪೆಟ್ರೋಲ್ ನಾರಾಯಣಸ್ವಾಮಿ ಪ್ರಕರಣಗಳನ್ನು ಉಲ್ಲೇಖಿಸಲಾಗಿದ್ದು, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟ ಕೊನೆಗೊಳಿಸಲು ಶೀಘ್ರವೇ ಐಪಿಎಸ್ ಅಧಿಕಾರಿಗಳ ಸಭೆ ಕರೆಯಬೇಕೆಂದು ಪತ್ರದಲ್ಲಿ ಕೋರಲಾಗಿದೆ.
ರವಿ ಚನ್ನಣ್ಣನವರ್ ಸೇರಿ 20 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಪತ್ರದ ಸಂಬಂಧ ಗೃಹ ಸಚಿವ ರಾಮಲಿಂಗಾ ರೆಡ್ಡಿ ಮತ್ತು ಗೃಹ ಇಲಾಖೆ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಜೈನ್ ಅವರೊಂದಿಗೆ ಮಾತನಾಡಿರುವ ಸಿದ್ದರಾಮಯ್ಯ ಅವರು ಪತ್ರದ ಬಗ್ಗೆ ಇಂದು ಮಧ್ಯಾಹ್ನದ ಒಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಆದರೆ ಐಪಿಎಸ್ ಅಧಿಕಾರಿಗಳ ಸಂಘದ ಕಾರ್ಯದರ್ಶಿ ಮೊಹಂತಿ ಅವರು 'ಶರ್ಮಾ ಅವರು ಪದಾಧಿಕಾರಿಗಳ ಜೊತೆ ಚರ್ಚಿಸದೆ ಏಕಾ-ಏಕಿ ಪತ್ರ ಬರೆದಿದ್ದಾರೆ ಎಂದು ಮುಖ್ಯಮಂತ್ರಿ ಸಚಿವಾಲಯಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮುಖ್ಯಮಂತ್ರಿ ಸಚಿವಾಲಯವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಶರ್ಮಾ ಅವರು ತಮ್ಮ ಅಧಿಕೃತ ಲೆಟರ್ ಹೆಡ್ ಬಳಸಿ ಪತ್ರ ಬರೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಅಷ್ಟೆ ಅಲ್ಲದೆ ಗೊಂದಲ ಮೂಡಿಸಲು ಪ್ರಯತ್ನಿಸಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಪರಪ್ಪನ ಅಗ್ರಹಾರ ಅವ್ಯವಹಾರ : ಐಪಿಎಸ್ ಅಧಿಕಾರಿ ರೂಪಾಗೆ ಗೆಲುವು
ಪತ್ರದಲ್ಲಿ
ಈ
ಪ್ರಕರಣಗಳನ್ನು
ಉಲ್ಲೇಖಿಸಲಾಗಿದೆ
*
ಮೈಸೂರಿನಲ್ಲಿ
ಐಎಎಸ್
ಅಧಿಕಾರಿ
ರಶ್ಮಿ
ಮೇಲೆ
ಹಲ್ಲೆ
*
ಮೈಸೂರಿನ
ಜಿಲ್ಲಾಧಿಕಾರಿಯಾಗಿದ್ದ
ಶಿಖಾ
ಅವರ
ಮೇಲೆ
ದಾಳಿ,
ವೈಯಕ್ತಿಕ
ಸ್ವಾತಂತ್ರ್ಯಕ್ಕೆ
ಧಕ್ಕೆ
ಆಯಿತು.
ಅವರು
ಎಫ್ಐಆರ್
ದಾಖಲಿಸಲು
ಗಂಟೆಗೂ
ಹೆಚ್ಚು
ಕಾಲ
ಕಾಯಬೇಕಾಯಿತು
*
ಒಬ್ಬ
ರಾಜಕಾರಣಿ
ಕಚೇರಿಗೆ
ನುಗ್ಗಿ
ಪೆಟ್ರೋಲ್
ಸುರಿದು
ಬೆಂಕಿ
ಹಚ್ಚಲು
ಪ್ರಯತ್ನಿಸಿದ,
ಆದರೆ
ಕ್ರಮ
ಕೈಗೊಳ್ಳುವಲ್ಲಿ
ಉದಾಸೀನ
ತೋರಲಾಯಿತು
*
ಯುಬಿ
ಸಿಟಿಯಲ್ಲಿ
ಅಮಾಯಕನ
ಮೇಲೆ
ದಾಳಿಯಾಯಿತು.
ಆದರೆ,
ಕ್ರಮ
ಕೈಗೊಳ್ಳುವಲ್ಲಿ
ಉದಾಸೀನ
ತೋರಲಾಯಿತು.