ಕಾಮಗಾರಿ ಪೂರ್ಣವಾಗದಿದ್ದರೂ ಮೇಲ್ಸೇತುವೆ ಉದ್ಘಾಟನೆ?
ಬೆಂಗಳೂರು, ಮಾರ್ಚ್ 1 : ನಗರದ ಓಕಳಿಪುರಂನಲ್ಲಿ ಮೊದಲ ಹಂತದ ಮೇಲ್ಸೇತುವೆ ಕಾಮಗಾರಿ ಮುಗಿಯುವ ಮೊದಲ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ ಮಾಡಿರುವುದು ಸಾರ್ವಜನಿಕರಿಗೆ ಬೇಸರ ತಂದಿದೆ.
ಕಾಮಗಾರಿ ಮುಗಿಯಲು ಇನ್ನು 6 ತಿಂಗಳು ಮೊದಲೇ ಏಕಾಏಕಿಯಾಗಿ ಬಂದು ಉದ್ಘಾಟನೆ ನೆರವೇರಿಸಿದ್ದಾರೆ. ಅಂಡರ್ ಪಾಸ್ ಕಾರ್ಯ ಕೂಡ ಅರ್ಧದಲ್ಲೇ ನಿಂತಿದೆ ಎಂದು ಸ್ಥಳೀಯರು ದೂರಿದ್ದಾರೆ. ಮಾರ್ಚ್ ೧೫ರಿಂದ ಚುನಾವಣಾ ಸಂಹಿತೆ ಜಾರಿ ಆತಂಕದಿಂದ ಕಾಮಗಾರಿ ಮುಗಿಯದಿದ್ದರೂ ಮೇಲ್ಸೇತುವೆ ಉದ್ಘಾಟನೆ ಮಾಡಲಾಗಿದೆ.
ಓಕಳಿಪುರಂ ಜಂಕ್ಷನ್ ನಿಂದ ಫೌಂಟೇನ್ ವೃತ್ತದವರೆಗೆ ಕಾರಿಡಾರ್ ರಸ್ತೆ ನಿರ್ಮಿಸಲಾಗುತ್ತಿದೆ. 430 ಮೀಟರ್ ಉದ್ದದ ಮೇಲ್ಸೇತುವೆಯನ್ನು ಸಿದ್ದರಾಮಯ್ಯ ಉದ್ಘಾಟಿಸಿದ್ದು, ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್, ಮೇಯರ್ ಸಂಪತ್ ರಾಜ್ ಇತರೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
2012 ರಲ್ಲಿ ಶಂಕುಸ್ಥಾಪನೆಯಾದ ಓಕಳಿಪುರ ಜಂಕ್ಷನ್ ಬಳಿಯ 8 ಲೈನ್ ಕಾರಿಡಾರ್ ಯೋಜನೆಗೆ ಒಟ್ಟು103 ಕೋಟಿ ರೂ ವೆಚ್ಚವಾಗಲಿದೆ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
ಈಜಿಪುರ-ಕೇಂದ್ರೀಯ ಸದನ ಜಂಕ್ಷನ್ ಫ್ಲೈಓವರ್ ನಿರ್ಮಾಣ ಆರಂಭ
ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ