ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

41 ಲಕ್ಷ ಸಿಕ್ಕಿದ್ದು ನಿಜವಾದ್ರೆ ರಾಜೀನಾಮೆ: ರಮೇಶ್ ಜಾರಕಿಹೊಳಿ

By Ananthanag
|
Google Oneindia Kannada News

ಬೆಂಗಳೂರು, ಜನವರಿ 25: ತಮ್ಮ ಮನೆ ಮೇಲೆ ನಡೆದಿರುವ ಐಟಿ ದಾಳಿಯಲ್ಲಿ ಅಧಿಕಾರಿಗಳಿಗೆ ದೊರೆತಿರುವುದು ಕೇವಲ ರು.41 ಸಾವಿರ. ರು.41 ಲಕ್ಷ ಸಿಕ್ಕಿದೆ ಅಂದ್ರೆ ಆಗಲೇ ರಾಜೀನಾಮೆ ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ನನಗೆ ಐಟಿ ಅಧಿಕಾರಿಗಳ ಮೇಲೆ ವಿಶ್ವಾಸವಿದೆ. ಬೆಳಗಾವಿಯಲ್ಲಿ ಒಟ್ಟು 16 ಮನೆಗಳ ಮೇಲೆ ಅವರು ದಾಳಿ ನಡೆಸಿದ್ದಾರೆ. ಆದರೂ ಇಲ್ಲದ ಆಸ್ತಿ ಮೇಲೆ ಅಪಪ್ರಚಾರ ನಡೆಯುತ್ತಿದೆ. ಈಗಾಗಲೇ ವರದಿ ಬಂದಿರುವಂತೆ ನಗದಾಗಲಿ, ಚಿನ್ನಾಭರಣವಾಗಲಿ ಇಲ್ಲ. ಒಂದು ವೇಳೆ ಹೊಸ ಮುಖಬೆಲೆಯ 2 ಸಾವಿರ ನೋಟುಗಳು 41ಲಕ್ಷ ದೊರೆತಿರುವುದು ನಿಜವಾದರೆ ಆ ಕ್ಷಣದಲ್ಲಿಯೇ ರಾಜೀನಾಮೆ ನೀಡುವುದಾಗಿ ತಿಳಿಸಿದರು. ಇನ್ನು ಕೆಪಿಸಿಸಿ ಅಧ್ಯಕ್ಷರಾಗಲಿ, ಮುಖ್ಯ ಮಂತ್ರಿಗಳಾಗಲಿ ರಾಜೀನಾಮೆ ಬಯಸಿದರೆ ಆಗಲೇ ರಾಜೀನಾಮ ನೀಡುತ್ತೇನೆ ಎಂದು ತಿಳಿಸಿದರು.[ಐಟಿ ದಾಳಿ, ವರದಿ ಇನ್ನು ಕೈಸೇರಿಲ್ಲವೆಂದ ಸಿದ್ದರಾಮಯ್ಯ]

if IT officials declare rs 40 lakhs of recovered from house I quit my post: ramesh jarkiholi

ತಾವು ಸೌಭಾಗ್ಯಲಕ್ಷ್ಮಿ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾಗಿರುವ ಕಾರಣಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ವರದಿ ಆಗಿರುವಂತೆ ನನ್ನ ಬಳಿ ಅಷ್ಟೊಂದು ಹಣ ಇಲ್ಲ. ಸಿಕ್ಕಿರುವ ಮಾಹಿತಿ ಸುಳ್ಳು ಪಕ್ಷದ ಇರುವ ಅಸಮಾಧಾನದ ಕಾರಣದಿಂದಾಗಿ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಟಾಂಗ್ ನೀಡಿದರು.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಟಿ ವರದಿ ನನಗೆ ದೊರೆತಿಲ್ಲ ಎಂದಿದ್ದಾರೆ. ಅಲ್ಲದೆ ಹದಿನಾರು ಕಡೆ ಐಟಿ ದಾಳಿ ನಡೆದಿದೆ ಎಂದು ಹೇಳಲಾಗಿದ್ದರು ಎಲ್ಲಿ , ಯಾರ ಯಾರ ಮನೆಯ ಮೇಲೆ ನಡೆದಿದೆ ಎಂಬ ಮಾಹಿತಿ ತಿಳಿಯಬೇಕಿದೆ.

English summary
Replying to the his resignation demand minister Ramesh Jarakiholi says, he will definitely quit his post, if IT officials declare 40 lakhs of rupees recovered from his house, while the actual amount is only 40 thousands.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X