ಚರ್ಚೆಗೆ ಗ್ರಾಸವಾಯ್ತು ಐಎಎಸ್ ಅಧಿಕಾರಿ ಸುಬೋಧ್ ಯಾದವ್ ಟ್ವೀಟ್
ಬೆಂಗಳೂರು, ಅಕ್ಟೋಬರ್ 17: ಕಲಬುರಗಿ ಪ್ರಾದೇಶಿಕ ಆಯುಕ್ತ ಸುಬೋಧ್ ಯಾದವ್ ಅವರು ಮಾಡಿರುವ ಟ್ವೀಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಹಾಗಾದರೆ ಅವರು ಮಾಡಿರುವ ಟ್ವೀಟ್ ಏನು ಎನ್ನುವುದು ಕುತೂಹಲ ಮೂಡಿಸಿದೆ.
ಐಎಎಸ್ ಅಧಿಕಾರಿ ಮನೆಗೆ ಕನ್ನ ಹಾಕಿದ್ದ ಖದೀಮರು ಸಿಕ್ಕಿಬಿದ್ರು
ನಾನು ಕಚೇರಿಯಲ್ಲಿಂದ ಕೆಟ್ಟ ದಿನ ಎದುರಿಸಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಸುಬೋಧ್ ಯಾದವ್ ದಕ್ಷ ಅಧಿಕಾರಿ, ಈ ಕಾರಣದಿಂದಲೇ ಹಲವಾರು ಬಾರಿ ಅವರಿಗೆ ವರ್ಗಾವಣೆಯಾಗಿದೆ. ಇಂತಹ ಅಧಿಕಾರಿಯಿಂದ ಬಂದ ಮಾತಿದೆ. ಹಾಗಾದರೆ ಈ ಹೇಳಿಕೆಗೆ ಕಾರಣವಾದರೂ ಏನು ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಕಚೇರಿಯಲ್ಲಿ ಇಂದು ಕೆಟ್ಟ ದಿನವನ್ನು ಅನುಭವಿಸಿದೆ, ಎಷ್ಟೋ ಸಲ ಒಳ್ಳೆಯ ಕೆಲಸ ಮಾಡಿದರೂ ಕೂಡ ಅದು ಗಣನೆಗೆ ಬರುವುದಿಲ್ಲ, ಕೆಲವು ಅನಗತ್ಯ ವಿಚಾರಗಳು ಮಹತ್ವವನ್ನು ನೀಡುತ್ತದೆ ಎಂದು ಬರೆದುಕೊಂಡಿದ್ದಾರೆ. ಬಳಿಕ ಹೋಗಲಿ ಬಿಡಿ ಇದೇ ಜೀವನ ಆದರೆ ಜೀವನ ಸದಾ ಸಿಹಿಯಾಗಿರುವುದಿಲ್ಲ ಆದರೆ ಉತ್ತಮ ಕೆಲಸ ಮಾಡಿಯೂ ಕೆಟ್ಟ ಅನುಭವಗಳಾದರೆ ನೋವುಂಟಾಗುತ್ತದೆ ಎಂದಿದ್ದಾರೆ.
ಸಮ್ಮಿಶ್ರ ಸರ್ಕಾರದ ಮೊದಲ ಐಎಎಸ್ ವರ್ಗಾವಣೆ: ಯಾವ ಇಲಾಖೆಗೆ ಯಾರು?
Had a very bad day in the office today...sometimes whatever you do, will not be counted and other trivials become more important..anyway that's life...not always sweet..but it hurts if you are passionately involved...
— Subodh Yadav IAS (@subodhyadav111) October 15, 2018
ಸುಬೋಧ್ ಅವರ ಟ್ವೀಟ್ಗೆ 20ಮಂದಿ ರಿ ಟ್ವೀಟ್ ಮಾಡಿದ್ದು, 61ಮಂದಿ ಮೆಸೇಜ್ ಮಾಡುವ ಮೂಲಕ ಸಾಂತ್ವನ ಹೇಳಿದ್ದಾರೆ. 223ಮಂದಿ ಲೈಕ್ ಮಾಡಿದ್ದಾರೆ. ವಿಭಾಗೀಯ ಆಯುಕ್ತರನ್ನಾಗಿ ನೇಮಿಸಿದಾಗ ಜೀವನ ಅಚ್ಚರಿಗಳಿಂದ ತುಂಬಿರುತ್ತದೆ ಎಂಬುದನ್ನು ಕೇಳಿದ್ದೆ ಆದರೆ ಎಲ್ಲರಿಗೂ ಅಲ್ಲ ಎಂದು ಪೋಸ್ಟಿಂಗ್ ಟ್ವೀಟ್ ಮಾಡಿದ್ದಾರೆ.