ಚಿಕಿತ್ಸೆ ಸಿಗದೆ ಮಗು ನಾಲ್ಕು ಗಂಟೆ ಆಂಬ್ಯುಲೆನ್ಸ್ನಲ್ಲಿತ್ತು
ಬೆಂಗಳೂರು, ಡಿ. 10 : ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಸೌಲಭ್ಯವಿಲ್ಲ ಎಂದು ತುರ್ತು ಚಿಕಿತ್ಸೆ ಅಗತ್ಯವಿದ್ದ ಮಗುವನ್ನು ಗಂಟೆಗಟ್ಟಲೇ ಆಂಬ್ಯುಲೆನ್ಸ್ನಲ್ಲಿ ಅಲೆದಾಡಿಸಿರುವ ವೈದ್ಯರು, ಮಾಧ್ಯಮಗಳ ಮಧ್ಯಪ್ರವೇಶದ ನಂತರ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.
ಬೆಂಗಳೂರಿನ
ನಿಮ್ಹಾನ್ಸ್,
ಇಂದಿರಾ
ಗಾಂಧಿ,
ವಾಣಿ
ವಿಲಾಸ
ಆಸ್ಪತ್ರೆಯ
ವೈದ್ಯರು
ಮಂಗಳವಾರ
ರಾತ್ರಿ
ಮಗುವನ್ನು
ಸುಮಾರು
ನಾಲ್ಕು
ಗಂಟೆಗಳ
ಕಾಲ
ಆಂಬ್ಯುಲೆನ್ಸ್ನಲ್ಲಿ
ಅಲೆದಾಡಿಸಿದ್ದಾರೆ.
ಮಾಧ್ಯಮಗಳು
ಮಧ್ಯ
ಪ್ರವೇಶಿಸಿದ
ನಂತರ
ವಾಣಿ
ವಿಲಾಸ
ಆಸ್ಪತ್ರೆಯವರು
ಮಗುವನ್ನು
ದಾಖಲಿಸಿಕೊಂಡು
ಚಿಕಿತ್ಸೆ
ನೀಡುತ್ತಿದ್ದಾರೆ.
ಘಟನೆ ವಿವರ : ಮಂಗಳವಾರ ಸಂಜೆ 7 ಗಂಟೆ ಸುಮಾರಿಗೆ ಆನಂದ್ (8) ಎಂಬ ಮಗು ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ಕೆಳಗೆ ಬಿದ್ದಿದ್ದಾನೆ. ಮೂರ್ಛೆ ರೋಗದಿಂದ ಬಳಲುತ್ತಿದ್ದ ಆತನನ್ನು ಮೊದಲು ನಿಮ್ಹಾನ್ಸ್ಗೆ ಕರೆದುಕೊಂಡು ಹೋಗಲಾಗಿದೆ. ವೆಂಟಿಲೇಟರ್ ಇಲ್ಲ ಬೇರೆ ಆಸ್ಪತ್ರೆಗೆ ದಾಖಲಿಸಿ ಎಂದು ವೈದ್ಯರು ಹೇಳಿದ್ದಾರೆ.
ನಂತರ ಇಂದಿರಾ ಗಾಂಧಿ ಆಸ್ಪತ್ರೆಯ ವೈದ್ಯರು ತುರ್ತು ಚಿಕಿತ್ಸೆ ಅಗತ್ಯವಿದ್ದ ಮಗುವನ್ನು ದಾಖಲಿಸಿಕೊಳ್ಳದೆ, ಇಲ್ಲಿಯೂ ವೆಂಟಿಲೇಟರ್ ಸೌಲಭ್ಯವಿಲ್ಲ. ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಎಂದು ಪೋಷಕರಿಗೆ ಸೂಚಿಸಿದ್ದಾರೆ.
ನಂತರ ವಾಣಿ ವಿಲಾಸ ಆಸ್ಪತ್ರೆಯಲ್ಲಿಯೂ ಪೋಷಕರಿಗೆ ಇದೇ ಉತ್ತರ ದೊರಕಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಲು ಶಕ್ತಿ ಇಲ್ಲದ ಪೋಷಕರು ಸುಮಾರು ನಾಲ್ಕು ಗಂಟೆ ಮಗುವನ್ನು ಆಂಬ್ಯುಲೆನ್ಸ್ನಲ್ಲಿ ಇಟ್ಟುಕೊಂಡು ಆಸ್ಪತ್ರೆಯಿಂದ ಆಸ್ಪತ್ರೆಗೆ ಆಲೆದಾಡಿದ್ದಾರೆ.
ಸಂಜೆ 7 ಗಂಟೆಗೆ ಘಟನೆ ನಡೆದರೂ ಪೋಷಕರು ಮಗುವನ್ನು ಆಸ್ಪತ್ರೆಗೆ ದಾಖಲು ಮಾಡಲು ಸಾಧ್ಯವಾಗಲಿಲ್ಲ. ವಾಣಿ ವಿಲಾಸ ಆಸ್ಪತ್ರೆ ಬಳಿ ಮಾಧ್ಯಮಗಳು ಮಧ್ಯಪ್ರವೇಶಿಸಿದಾಗ ವೈದ್ಯರು ಮಗುವನ್ನು ರಾತ್ರಿ 11 ಗಂಟೆ ಸುಮಾರಿಗೆ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ.
ಖಾದರ್ ಪ್ರತಿಕ್ರಿಯೆ : ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪಾಲ್ಗೊಂಡಿರುವ ಆರೋಗ್ಯ ಸಚಿವ ಯು.ಟಿ.ಖಾದರ್ ಘಟನೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.