ಸ್ಕೈ ಬಾರ್ ದಾಂಧಲೆ ಪ್ರಕರಣದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅರ್ಜಿ ವಜಾ
2014ರಲ್ಲಿ ನಡೆದಿದ್ದ ಪ್ರಕರಣ, ಅವಧಿ ಮೀರಿ ಬಾರ್ ನಲ್ಲಿ ಕುಳಿತಿದ್ದನ್ನು ಪ್ರಶ್ನಿಸಿದ್ದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಕಾಶಪ್ಪನವರ್
ಬೆಂಗಳೂರು, ಜನವರಿ 24: ಸ್ಕೈ ಬಾರ್ ನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ತಿರಸ್ಕರಿಸಿದೆ.
2014ರ ಜುಲೈ 3ರಂದು ಸ್ಕೈಬಾರ್ ನಲ್ಲಿ ಮಧ್ಯರಾತ್ರಿವರೆಗೂ ಇದ್ದದ್ದನ್ನು ರಾತ್ರಿ ಬೀಟ್ ಗೆ ಬಂದಿದ್ದ ಪೊಲೀಸರು ಪ್ರಶ್ನಿಸಿದ್ದರು. ಆ ವೇಳೆ, ಮಾತಿಗೆ ಮಾತು ಬೆಳೆದು, ಕಾಶಪ್ಪನವರ್ ಹಾಗೂ ಅವರ ಬೆಂಬಲಿಗರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಮಾಡಿದ್ದರು.[ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ವಾರೆಂಟ್!]
ಈ ಘಟನೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿ, ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿತ್ತು. ಆಗಿನಿಂದ ಈವರೆಗೂ ಈ ಪ್ರಕರಣ ವಿಚಾರಣೆ ನಡೆಯುತ್ತಲೇ ಇದೆ.[ಸ್ಕೈ ಬಾರ್ ಕೇಸ್ : ಶಾಸಕ ಕಾಶಪ್ಪನವರ್ ಮೇಲೆ ಚಾರ್ಜ್ ಶೀಟ್]
Comments
English summary
High court rejects the plea filed by MLA Vijayananda Kashappanavar to cancel the case, in which he is facing the charges such as assaulting the duty police in 2014.