ಬೆಂಗಳೂರಿನ ಜನಜೀವನವನ್ನು 'ಬಂದ್' ಮಾಡಿದ ಜಿಟಿಜಿಟಿ ಮಳೆ
ಬೆಂಗಳೂರು, ಜುಲೈ 29 : ಉದ್ಯಾನ ನಗರಿ ಬೆಂಗಳೂರಿನಲ್ಲಿ ತಡರಾತ್ರಿ ಆರಂಭವಾದ ಮಳೆ ಶುಕ್ರವಾರ ಬೆಳಗ್ಗೆಯಾದರೂ ಸುರಿಯುತ್ತಲೇ ಇದೆ. ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಜನ ಜೀವನ ಅಸ್ತವ್ಯಸ್ಥಗೊಂಡಿದೆ.
ಮುಂಜಾನೆಯೇ
ಮಳೆ
ಸುರಿಯುತ್ತಿರುವುದರಿಂದ
ಪಾರ್ಕ್ಗಳು
ವಾಯುವಿಹಾರಿಗಳಿಲ್ಲದೇ
ಖಾಲಿಯಾಗಿವೆ.
ಹಾಲು
ತರಲು
ಬಂದವರು
ಛತ್ರಿ
ಹಿಡಿಯುವುದು
ಅನಿವಾರ್ಯ.
ಮಕ್ಕಳನ್ನು
ಶಾಲೆಗೆ
ಕಳಿಸುವುದು
ಹೇಗೆ?,
ಆಫೀಸಿಗೆ
ಹೋಗುವುದು
ಹೇಗೆ
ಎಂಬುದು
ಜನರ
ಚಿಂತೆಯಾಗಿದೆ.[ಕರ್ನಾಟಕದ
ಯಾವ
ಜಲಾಶಯದಲ್ಲಿ
ಎಷ್ಟು
ನೀರಿದೆ?]
ಕೋಡಿಚಿಕ್ಕನಹಳ್ಳಿ
ಸೇರಿದಂತೆ
ನಗರದ
ವಿವಿಧ
ಪ್ರದೇಶಗಳಲ್ಲಿ
ಮನೆಗಳಿಗೆ
ನೀರು
ನುಗ್ಗಿದೆ.
ಬಹುತೇಕ
ರಸ್ತೆಗಳಲ್ಲಿ
ನೀರು
ತುಂಬಿಕೊಂಡಿದ್ದು,
ಬೈಕ್
ಸವಾರರು
ಪರದಾಡುತ್ತಿದ್ದಾರೆ.
ನೀರಿನಿಂದಾಗಿ
ವಾಹನ
ಸಂಚಾರ
ನಿಧಾನಗತಿಯಲ್ಲಿ
ಸಾಗುತ್ತಿದೆ.[ಮಳೆ
ಎದುರಿಸಲು
ನಮ್ಮ
ಬೆಂಗಳೂರು
ಸಿದ್ಧವೇ?]
ಬೆಂಗಳೂರು ಹವಾಮಾನ : ತಾಪಮಾನ 21ºC , ಗಾಳಿ 2.83 , ತೇವಾಂಶ 0.95 , ಒತ್ತಡ 1008.86 pa, ಮಳೆಯ ಸಾಧ್ಯತೆ #bengaluru #weather
— ಹವಾಮಾನ ವರದಿ ಬೆಂಗಳೂರು (@blr_weather) July 29, 2016
ಜೆ.ಪಿ.ನಗರದ
ರಾಗಿಗುಡ್ಡ,
ಹಳೆ
ಏರ್ಪೋರ್ಟ್
ರಸ್ತೆಯ
ಕಮಾಂಡೋ
ಆಸ್ಪತ್ರೆ,
ಬಿಟಿಎಂ
ಬಡಾವಣೆಯಲ್ಲಿ
ಮರಗಳು
ಧರೆಗುರುಳಿವೆ.
ಕೋಡಿಚಿಕ್ಕನಹಳ್ಳಿಯಲ್ಲಿ
ರಸ್ತೆ
ಮೇಲೆ
3
ರಿಂದ
4
ಅಡಿ
ನೀರು
ನಿಂತಿದ್ದು,
ವಾಹನ
ಸಂಚಾರ
ಅಸ್ತವ್ಯಸ್ತವಾಗಿದೆ.
'ಉಷ್ಣಾಂಶದಲ್ಲಿ ಏರುಪೇರಾಗಿರುವ ಹಿನ್ನಲೆಯಲ್ಲಿ ಬೆಂಗಳೂರು ನಗರದಲ್ಲಿ ಮಳೆ ಸುರಿಯುತ್ತಿದೆ. ಇನ್ನೂ ಮೂರು ದಿನ ರಾತ್ರಿ ಹೊತ್ತು ಭಾರೀ ಮಳೆಯಾಗಲಿದೆ' ಎಂದು ಹವಾಮಾನ ಇಲಾಖೆ ನಿರ್ದೇಶಕ ಸುಂದರ್ ಮೇತ್ರಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.