ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಶಾಸಕರು ಹೋಟೆಲ್‌ನಲ್ಲಿ ಬರ ವೀಕ್ಷಣೆ ಮಾಡುತ್ತಿದ್ದಾರಾ? ಸಿಎಂ ಪ್ರಶ್ನೆ

|
Google Oneindia Kannada News

ಬೆಂಗಳೂರು, ಜನವರಿ 17: ಇತ್ತೀಚಿನ ದಿನಗಳಲ್ಲಿ ರೆಸಾರ್ಟ್ ಪಾಲಿಟಿಕ್ಸ್ ಹೆಚ್ಚಾಗಿದೆ, ಬಿಜೆಪಿ ಶಾಸಕರು ರೆಸಾರ್ಟ್‌ನಲ್ಲಿ ಕುಳಿತು ಬರ ವೀಕ್ಷಣೆ ಮಾಡುತ್ತಿದ್ದಾರೆಯೇ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುಗ್ರಾಮದಲ್ಲಿ ಬಿಜೆಪಿ ಶಾಸಕರನ್ನು ಕೂಡಿ ಹಾಕಿದ್ದಾರೆ, ಹೋಟೆಲ್‌ನಲ್ಲಿ ಕುಳಿತು ಶಾಸಕರು ಬರ ವೀಕ್ಷಣೆ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್? ಆಪರೇಷನ್ ಠುಸ್... 3 ನೇ ಬಾರಿಗೂ ಯಡಿಯೂರಪ್ಪ ಫೇಲ್?

ನಾನು ಎರಡು ದಿನ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿದ್ದಕ್ಕೆ ಬಿಎಸ್‌ವೈ ವಿವಾದ ಮಾಡಿದ್ದರು, ಈಗ 100 ಮಂದಿ ಶಾಸಕರಿಗೆ ದಿಗ್ಬಂಧನ ಹಾಕಿ ಕೂಡಿ ಹಾಕಿದ್ದೀರ ಇದಕ್ಕೇನು ಉತ್ತರ ಕೊಡುತ್ತೀರ ಎಂದರು.

HDK attack BJP of resort politics in times of Drought

ನಿಮ್ಮ ಹಾಗೆ ನಾವು ಶಾಸಕರನ್ನು ಎಲ್ಲೂ ಕೂಡಿಹಾಕಿಲ್ಲ, ನಮ್ಮ ಶಾಸಕರನ್ನು ಫ್ರೀಯಾಗಿ ಬಿಟ್ಟಿದ್ದೇವೆ, ನಮ್ಮ ಯಾವ ಶಾಸಕರಿಗೀ ದಿಗ್ಬಂಧನ ಹಾಕಿರಲಿಲ್ಲ, ಬಿಜೆಪಿಯ ಶಾಸಕರನ್ನು ಸೆಳೆಯುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ ಎಂದು ಹೇಳಿದರು.

ರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ HDK ಖಡಕ್ ಪ್ರತಿಕ್ರಿಯೆರಾಜ್ಯ ರಾಜಕೀಯ ಬೆಳವಣಿಗೆ ಬಗ್ಗೆ HDK ಖಡಕ್ ಪ್ರತಿಕ್ರಿಯೆ

ಬಿಜೆಪಿಯವರು ರೆಸಾರ್ಟ್ ಪಾಲಿಕ್ಸ್ ಮಾಡುತ್ತಿದ್ದಾರೆ ಎಂದು ನಾವು ಭಯದಿಂದ ಕುಳಿತಿಲ್ಲ, ನಾನು ಕೂಲ್ ಆಗಿಯೇ ಇದ್ದೇನೆ, ನಮ್ಮ ಶಾಸಕರು ಏನು ಎಂದು ನಮಗೆ ತಿಳಿದಿದೆ ಯಾವುದೇ ಆತಂಕವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

English summary
The ruling coalition parties of JD(S) and Congress Chief minister HD Kumaraswamy hit back at the opposition BJP neglecting the state which is facing a serious drought situation and having Gala time in Gurugram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X