ಮತ್ತೆ ಸಿಎಂ ಆಗ್ತೀನಿ: ಸಿದ್ದು ಮಾತಿಗೆ ಕುಮಾರಸ್ವಾಮಿ ಏನಂದ್ರು?
Recommended Video
ಬೆಂಗಳೂರು, ಆಗಸ್ಟ್ 25: "ಆಗೋದಾದ್ರೆ ಆಗಲಿ, ಸಂತೋಷ!" ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಎಚ್ ಡಿ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ!
"ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗ್ತೀನಿ" ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, 'ಆಗಲಿ, ಸಂತೋಷ' ಎಂದಷ್ಟೇ ಪ್ರತಿಕ್ರಿಯೆ ನೀಡಿ ಮುಖ ತಿರುಗಿಸಿಕೊಂಡು ಹೊರಟರು ಎಚ್ ಡಿ ಕುಮಾರಸ್ವಾಮಿ! ಪ್ರತಿಕ್ರಿಯೆ ನೀಡುವಾಗಲೂ ಅವರು ಮುಖ ತಿರುಗಿಸಿಕೊಂಡೇ ಇದ್ದರು!
ನಾನು ಮತ್ತೆ ಮುಖ್ಯಮಂತ್ರಿಯಾಗ್ತೀನಿ: ಸಿದ್ದರಾಮಯ್ಯ ಮಾತಿನ ಒಳಾರ್ಥವೇನು?
ನಿನ್ನೆ(ಆಗಸ್ಟ್
25)
ಹಾಸನ
ಜಿಲ್ಲೆಯ
ಹೊಳೆನರಸೀಪುರ
ತಾಲೂಕಿನ
ಹಾಡ್ಯ
ಗ್ರಾಮದಲ್ಲಿ
ದೇಗುಲವೊಂದರ
ಉದ್ಘಾಟನಾ
ಕಾರ್ಯಕ್ರಮದಲ್ಲಿ
ಮಾಜಿ
ಮುಖ್ಯಮಂತ್ರಿ
ಸಿದ್ದರಾಮಯ್ಯ
ಮಾತನಾಡುತ್ತಿದ್ದರು.
ಈ ಸಂದರ್ಭದಲ್ಲಿ 'ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡಿ, ಎಲ್ಲ ಜಾತಿಯ ಜನರಿಗೂ ಒಳಿತಾಗುವಂಥ ಯೋಜನೆಗಳನ್ನು ಜಾರಿಗೆ ತಂದರೂ ನಾನು ಮುಖ್ಯಮಂತ್ರಿಯಾಗದಂತೆ ಕೆಲವರು ಷಡ್ಯಂತ್ರ ನಡೆಸಿದರು. ' ಜನಾಶೀರ್ವಾದ ನನ್ನ ಮೇಲಿದೆ. ನಾನು ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ" ಎಂದು ಬಾದಾಮಿ ಶಾಸಕರೂ ಆದ ಸಿದ್ದರಾಮಯ್ಯ ಹೇಳಿದ್ದರು. ಅವರ ಈ ಹೇಳಿಕೆ ಸಮ್ಮಿಶ್ರ ಸರ್ಕಾರದಲ್ಲಿ ಹೊಸ ಸಂಚಲನ ಮೂಡಿಸಿತ್ತು.