ಬಿಬಿಎಂಪಿ ಟೆಂಡರ್ ಅಕ್ರಮ: ಹೈಕೋರ್ಟ್ ಛೀಮಾರಿ
ಬೆಂಗಳೂರು, ಆಗಸ್ಟ್ 2: ಕರ್ನಾಟಕದ ಪಾರದರ್ಶಕತೆ ಉಲ್ಲಂಘಿಸಿ ಮತ್ತೊಂದು ಭಾರಿ ಅಕ್ರಮವೆಸಗಲು ಮುಂದಾಗಿದ್ದ ಬಿಬಿಎಂಪಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಬಿಬಿಎಂಪಿಯ 565 ಆಟೋಗಳ ಖರೀದಿಗಾಗಿ ಬಿಬಿಎಂಪಿ ಕರೆದಿದ್ದ ತುರ್ತು ಟೆಂಡರ್ ಪ್ರಕ್ರಿಯೆಯನ್ನು ಹೈಕೋರ್ಟ್ ರದ್ದುಪಡಿಸಿದೆ.
ಬೆಂಗಳೂರಿನ 100 ಕಡೆ ನಿರ್ಮಾಣವಾಗಲಿದೆ ತ್ಯಾಜ್ಯ ಟ್ರಾನ್ಸ್ಫರ್ ಸ್ಟೇಷನ್
ಬಿಬಿಎಂಪಿ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಬೆಂಗಳೂರು ನಗರದಲ್ಲಿ ಒಣಕಸ ಸಂಗ್ರಹಿಸಲಿರುವ ಆಟೋಗಳಿಗೆ ಬಿಬಿಎಂಪಿ ಅಲ್ಪಾವಧಿ ಟೆಂಡರ್ ಕರೆದಿತ್ತು.565 ಆಟೋಗಳಿಗೆ ಕರೆದಿದ್ದ ಟೆಂಡರ್ನ್ನು ಹೈಕೋರ್ಟ್ ರದ್ದುಪಡಿಸಿದೆ. ಟೆಂಡರ್ ಕರೆಯುವಾಗ ಕರ್ನಾಟಕ ಪಾರದರ್ಶಕ ಕಾಯ್ದೆಯ ನಿಯಮ ಉಲ್ಲಂಘನೆಯಾಗಿದೆ ಎಂದು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
2018ರ ಜನವರಿ 4ರಂದು ಬಿಬಿಎಂಪಿ ಟೆಂಡರ್ ಕರೆದಿತ್ತು, ಒಣತ್ಯಾಜ್ಯ ಸಂಗ್ರಹ ಆಟೋಗಳ ಖರೀದಿಗಾಗಿ ಕರೆದಿದ್ದ ಟೆಂಡರ್ನಲ್ಲಿ 28.40 ಕೋಟಿ ವೆಚ್ಚದ ಟೆಂಡರ್ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅಗತ್ಯವಿದ್ದರೆ ನಿಯಮಗಳ ಪ್ರಕಾರ ಹೊಸದಾಗಿ ಟೆಂಡರ್ ಕರೆಯಲಿ ಎಂದು ಹೈಕೋರ್ಟ್ ಸೂಚನೆ ನೀಡಿದೆ.