ಏಕತಾ ಪ್ರತಿಮೆ: ರಾಜ್ಯದ ಗಣ್ಯರಿಗೆ ಗುಜರಾತ್ ಸಚಿವರಿಂದ ಆಹ್ವಾನ
ಬೆಂಗಳೂರು, ಅಕ್ಟೋಬರ್ 16: ಮಾಸಾಂತ್ಯಕ್ಕೆ ಗುಜರಾತ್ನಲ್ಲಿ ಲೋಕಾರ್ಪಣೆಗೊಳ್ಳಲಿರುವ ಜಗತ್ತಿನ ಅತಿ ಎತ್ತರದ ಪ್ರತಿಮೆ ಎನಿಸಿಕೊಂಡಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ಪ್ರತಿಮೆ ಅನಾವರಣಕ್ಕೆ ಕರ್ನಾಟಕದ ಸಚಿವರನ್ನು ಆಹ್ವಾನಿಸಲು ಗುಜರಾತ್ನ ಸಚಿವರ ದಂಡೇ ಆಗಮಿಸಿದೆ.
ಸದಾಶಿವನಗರದಲ್ಲಿ ಕೆಂಪೇಗೌಡರ ಪ್ರತಿಮೆ ಅನಾವರಣ
ಈ ಕುರಿತು ಮಂಗಳವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಜರಾತ್ ಸಚಿವರ ತಂಡ ಪ್ರತಿಮೆ ಸ್ಥಾಪನೆ ಹಾಗೂ ಅನಾವರಣ ಕುರಿತಂತೆ ಮಾಹಿತಿ ನೀಡಿದರು.
ಸರ್ದಾರ್ ಪಟೇಲ್ ಮತ್ತು ಏಕತಾ ಪ್ರತಿಮೆ ನಿರ್ಮಾಣ ಕುರಿತು ಸಾಕ್ಷ್ಯಚಿತ್ರ ಪ್ರಸಾರ ಮಾಡಲಾಯಿತು. ಏಕತಾ ಪ್ರತಿಮೆ ಅಕ್ಟೋಬರ್ 31ರಂದು ಸರ್ದಾರ್ ಪಟೇಲ್ ಅವರ ಜನ್ಮದಿನದಂದೇ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಿದರು.
5 ಸಾವಿರ ಮೆಟ್ರಿಕ್ ಟನ್ ಕಬ್ಬಿಣವನ್ನು ಜನರು ದೇಣಿಗೆ ನೀಡಿದ್ದಾರ, 2 ಸಾವಿರದ 332 ಕೋಟಿ ರೂಪಾಯಿ ವೆಚ್ಚದಲ್ಲಿ 48 ತಿಂಗಳಲಲ್ಇ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಪ್ರತಿಮೆ ಕೆಳಭಾಗದಲ್ಲಿ ಸರ್ದಾರ್ ಪಟೇಲರ ಕುರಿತು ದೊಡ್ಡ ಮ್ಯೂಸಿಯಂ ನಿರ್ಮಾಣ ಮಾಡಲಾಗಿದೆ. ಈ ಪ್ರತಿಮೆ ನಿರ್ಮಾಣಕ್ಕೆ 2300 ಕೋಟಿ ರೂ ವೆಚ್ಚವಾಗಲಿದೆ.
ಅಂಬೇಡ್ಕರ್ 'ನೀಲಿ' ಪ್ರತಿಮೆ ಈಗ ಪಂಜರದಲ್ಲಿ!
ಕಂಚು ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ಲಭ್ಯವಿಲ್ಲದ ಕಾರಣ ಗುತ್ತಿಗೆದಾರರು ಚೀನಾದಿಂದ ಕಂಚು ತರಿಸುವ ನಿರ್ಧಾರ ಕೈಗೊಂಡಿದ್ದಾರೆ, ಇದು ರಾಜ್ಯ ಸರ್ಕಾರದ ನಿರ್ಧಾರವಲ್ಲ, ಗುತ್ತಿಗೆದಾರರ ನಿರ್ಧಾರ ಎಂದು ತಿಳಿಸಿದ್ದಾರೆ.