ಜನರ ಆರೋಗ್ಯ ರಕ್ಷಣೆ ಸರಕಾರದ ಜವಾಬ್ದಾರಿ: ಶಾಸಕ ಡಾ.ಅಶ್ವಥನಾರಾಯಣ್
ಬೆಂಗಳೂರು, ಡಿಸೆಂಬರ್ 22: "ಆರೋಗ್ಯ ಕ್ಷೇತ್ರದ ಬಗ್ಗೆ ಹಲವು ವಿಚಾರಗಳನ್ನು ಹಂಚಿಕೊಳ್ಳಲಾಯಿತು. ಅದರಲ್ಲಿ ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಅಥವಾ ಪ್ರಗತಿ ಆಗಲು ಸರಕಾರ ತೆಗೆದುಕೊಳ್ಳಬೇಕಾದ ಕ್ರಮಗಳೇನು ಎಂಬ ಬಗ್ಗೆ ಚರ್ಚೆ ನಡೆಯಿತು. ಇದು ಬಹಳ ಮುಖ್ಯವಾದ ಚರ್ಚೆ" ಎಂದು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಅಶ್ವಥನಾರಾಯಣ್ ಹೇಳಿದ್ದಾರೆ.
ಸಂದರ್ಶನ - ಕರ್ನಾಟಕದಲ್ಲಿ ಕಾಂಗ್ರೆಸ್ ಮುಳುಗುತ್ತಿರುವ ದೋಣಿ!
ಆರೋಗ್ಯ ವಲಯದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಒಂದು ತಲ್ಲಣವಾಗಿದೆ. ಖಾಸಗಿ ಆಸ್ಪತ್ರೆಗಳ ವೈದ್ಯರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಹಾಗೂ ವ್ಯಕ್ತಪಡಿಸುತ್ತಿರುವುದು ನಿಮಗೂ ಗೊತ್ತಿರುವಂಥದ್ದೆ. ಇಂಥ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಬಗ್ಗೆ ಆರೋಗ್ಯಕರ ಚರ್ಚೆಯೊಂದು ನಡೆದಿದೆ.
ಇದರಲ್ಲಿ ಭಾಗಿಯಾಗಿದ್ದ ಅಶ್ವಥನಾರಾಯಣ್ ಆ ಕಾರ್ಯಕ್ರಮದ ಸುದ್ದಿಯ ಚಿತ್ರ ಹಾಗೂ ಮಾಹಿತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನರಿಗೆ ಕೈಗೆಟುಕುವ ದರದಲ್ಲಿ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿಯಾಗದಂಥ ಚಿಕಿತ್ಸೆ ಸಿಗಬೇಕು ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.