ಕೌಶಲ್ಯ ವೃದ್ಧಿ ಸ್ವಾವಲಂಬನ್ ಯೋಜನಾ ಮಾರ್ಗಸೂಚಿ ಪ್ರಕಟ
ಬೆಂಗಳೂರು, ಅಕ್ಟೋಬರ್, 07 : ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ, ಕೌಶಲ್ಯತೆಗೆ ಉತ್ತೇಜನ ನೀಡಲು ರಾಜ್ಯ ಸರ್ಕಾರ 'ಸ್ವಾವಲಂಬನ್' ಯೋಜನೆ ರೂಪಿಸಿತ್ತು. ಇದೀಗ ಮಾರ್ಗಸೂಚಿ ಪ್ರಕಟಿಸಿದ್ದು, ವಿದ್ಯಾರ್ಥಿಗಳಿಗೆ ಸಂತಸ ತಂದಿದೆ.
ಸರ್ಕಾರಿ ಹೊಸ ಉದ್ದಿಮೆ ಆರಂಭಿಸಲು ಮುಂದಾದಲ್ಲಿ ಈ ಯೋಜನೆ ಅಡಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲ ಸಂದಾಯವಾಗಲಿದ್ದು, ವಾರ್ಷಿಕ 10 ಲಕ್ಷ ರೂ ವರೆಗಿನ ಸಾಲದ ಮೇಲಿರುವ ಬಡ್ಡಿಯನ್ನು 3 ವರ್ಷದವರೆಗೆ ಸರ್ಕಾರವೇ ಭರಿಸಲಿದೆ. ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳನ್ನು ಖಾಸಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಕೌಶಲ್ಯದ ಎದುರು ಎತ್ತರಿಸಲು ಈ ನಿರ್ಧಾರಕ್ಕೆ ಬಂದಿದ್ದಾರೆ.[ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]
ಈ ಯೋಜನೆಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವಾಗ ಗ್ರಾಮೀಣ ಹಾಗೂ ನಗರ ವಿದ್ಯಾರ್ಥಿಗಳು ಎಂದು ವಿಂಗಡಿಸಲಾಗುತ್ತದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕ ಶಂಕರಪ್ಪ ಹೇಳಿದರು.
ಸ್ವಾವಲಂಬನ್ ಯೋಜನೆಯ ನಿಯಮಾವಳಿಗಳೇನು?
* ಈ ಯೋಜನೆಗೆ ಅರ್ಹವಾಗಲು ವಿದ್ಯಾರ್ಥಿ ಸರ್ಕಾರಿ ಕಾಲೇಜಿನಲ್ಲಿಯೇ ಯಾವುದಾದರೂ ಪದವಿ ಪಡೆದಿರಬೇಕು
* ಪ್ರಥಮ ಮತ್ತು ದ್ವಿತೀಯ ಪದವಿಯಲ್ಲಿ 50% ನಷ್ಟು ಅಂಕ ಗಳಿಸಿರಬೇಕು
* ಉದ್ದಿಮೆ ಆರಂಭಿಸುವ ಯೋಜನಾ ವರದಿಯ ಸಂಪೂರ್ಣ ವಿವರವನ್ನು ಪ್ರಸ್ತಾವನೆಯೊಂದಿಗೆ ಕಾಲೇಜಿನ ಪ್ರಾಂಶುಪಾಲರಿಗೆ ಸಲ್ಲಿಸಬೇಕು
* ಬೆಂಗಳೂರು ಕಾಲೇಜುಗಳಿಂದ ಸಲ್ಲುವ ಪ್ರಸ್ತಾವನೆಗಳು ಎಫ್ ಕೆಸಿಸಿಐ (Federation of Karnataka Chambers of Commerce and Industry), ಇತರೆ ಕೈಗಾರಿಕಾ ಸಂಸ್ಥೆಗಳಿಂದ ಯೋಜನಾ ವರದಿ ದೃಢಿಕರಣಗೊಂಡಿರಬೇಕು.
* ಜಿಲ್ಲಾಮಟ್ಟದಿಂದ ಸಲ್ಲಿತವಾಗುವ ಯೋಜನೆಗಳು ಜಿಲ್ಲಾ ಕೈಗಾರಿಕಾ ಸಂಸ್ಥೆಗಳಿಂದ ದೃಢಿಕರಣಗೊಳ್ಳಬೇಕು.