ಗೋರಕ್ಷಣೆಗಾಗಿ ಇಂದು ಬೆಂಗಳೂರಿನಲ್ಲಿ ಬಿಜೆಪಿ ಯಜ್ಞ
ಬೆಂಗಳೂರು, ಜನವರಿ 31: ಭಾರತೀಯರಲ್ಲಿ ಗೋವಿನಿಂದಾಗುವ ವಿವಿಧ ಉಪಯೋಗಗಳ ಕುರಿತು ಅರಿವು ಮೂಡಿಸುವ ಮತ್ತು ಗೋ ರಕ್ಷಣೆಯ ಕುರಿತು ಕಾಳಜಿ ಮೂಡಿಸುವ ಸಲುವಾಗಿ ರಾಜ್ಯ ಬಿಜೆಪಿ ಗೋರಕ್ಷಾ ಯಜ್ಞವನ್ನು ಹಮ್ಮಿಕೊಂಡಿದೆ. ಜೆ.ಪಿ.ನಗರದ ಪುಟ್ಟೇನಹಳ್ಳಿ ಮುಖ್ಯರಸ್ತೆಯಲ್ಲಿರುವ ಸತ್ಯಗಣಪತಿ ದೇವಸ್ಥಾನ ಮೈದಾನದಲ್ಲಿ ಯಜ್ಞ ನಡೆಯಲಿದೆ.
ಫೆ.2 ರಂದು ಮಧ್ಯಾಹ್ನ 2 ರಿಂದ ಫೆ.3ರ ಮಧ್ಯಾಹ್ನ 2 ರವರೆಗೆ ಅಂದರೆ 24 ಗಂಟೆಗಳ ಕಾಲ ಈ ಯಜ್ಞ ನಡೆಯಲಿದೆ. ಈ ಯಜ್ಞದಲ್ಲಿ ಗೋವಿನ ವಿವಿಧ ಉಪಯೋಗ ಮತ್ತು ಪ್ರಾಮುಖ್ಯತೆಯನ್ನು ಜನರಿಗೆ ತಿಳಿಸಲಾಗುತ್ತದೆ. ಮತ್ತು ಗ್ರಾಮೀಣ ಆರ್ಥಿಕತೆಯನ್ನು ಸುಧಾರಿಸುವ ಉದ್ದೇಶಕ್ಕಾಗಿ ಜಾನುವಾರುಗಳನ್ನು ರಕ್ಷಿಸುವುದು ಎಷ್ಟು ಅನಿವಾರ್ಯ ಎಂಬುದನ್ನೂ ಈ ಮೂಲಕ ತಿಳಿಸಲಾಗುತ್ತದೆ ಎಂದು ಬಿಜೆಪಿಯ ಗೋ ಸಂರಕ್ಷಣಾ ಘಟಕದ ಸಂಚಾಲಕ ಸಿದ್ಧಾರ್ಥ ಗೋಯೆಂಕಾ ತಿಳಿಸಿದ್ದಾರೆ.
"I Expect My MP to Support Cow Protection Bill"
— #ProtectWithPen Vani (@vshri_3) January 31, 2018
On Friday 2nd Feb, this Bill by Dr @Swamy39 will be discussed & put to vote in RajyaSabha.@SriSamsthana Abhayakshara is already creating waves in K'taka.@AnantkumarH Pls support this.@OneindiaKannada #ProtectWithPen pic.twitter.com/s3M7g7hMpC
ಗೋಹತ್ಯೆ ನಿಷೇಧ: ಸಂತರು ಸೇರಿ 50ಕ್ಕೂ ಹೆಚ್ಚು ಮಂದಿ ರಕ್ತದಲ್ಲಿ ಪತ್ರ
ಯಜ್ಞದ ಜೊತೆ ಅಖಂಡ ಭಾರತ ಎಂಬ ಕಾರ್ಯಕ್ರಮವೂ ನಡೆಯಲಿದೆ. ಮಾತ್ರವಲ್ಲ ನೃತ್ಯದ ಮೂಲಕ ರಾಮ-ಸೀತೆಯರ ಕಲ್ಯಾಣ ಮಹೋತ್ಸವವನ್ನೂ ತೋರಿಸಲಾಗುತ್ತದೆ.
ಯಜ್ಞದ ಸಮಾರೋಪ ಕಾರ್ಯಕ್ರಮ ಫೆ.3 ರಂದು ನಡೆಯಲಿದ್ದು, ಆ ದಿನ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಅನಂತ ಕುಮಾರ್ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ.
ಗೋರಕ್ಷೆಗಾಗಿ ಯಜ್ಞದೊಂದಿಗೆ, ಇಂದಿನ ರಾಜ್ಯಸಭೆಯ session ನಲ್ಲಿ #CowProtectionBill ಮಂಡನೆಯಾಗಲಿದೆ; ಆಗ ಎಲ್ಲಾ ಸದಸ್ಯರೂ ಬೆಂಬಲವನ್ನಿತ್ತರೆ, ಅದು ಅತಿ ದೊಡ್ಡ ಗೋರಕ್ಷಣೆಯಾದೀತು.. ಹಾಗೆಯೇ ಆಗಲೆಂದು ಆಶಿಸೋಣ.. #ProtectWithPen
— Akshatha Bhat T P (@AkshathaBhatTP) February 2, 2018