ಮುಖ್ಯಮಂತ್ರಿ ಕಣ್ಣೀರು ಹಾಕಿದ್ದಕ್ಕೆ ಉಪಮುಖ್ಯಮಂತ್ರಿ ಹೀಗಂದರು
ಬೆಂಗಳೂರು, ಜುಲೈ 15: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿನ್ನೆ ಸಮ್ಮಿಶ್ರ ಸರ್ಕಾರದಲ್ಲಿ ತಾನು ನೆಮ್ಮದಿಯಿಂದ ಇಲ್ಲ ಎಂದು ಹೇಳುತ್ತಾ ಜೆಡಿಎಸ್ ಸಭೆಯಲ್ಲಿ ಕಣ್ಣೀರು ಹಾಕಿರುವ ಬಗ್ಗೆ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
'ಅವರು ಹಾಗೆ ಹೇಗೆ ಹೇಳುತ್ತಾರೆ?, ಮುಖ್ಯಮಂತ್ರಿ ಸಂತೋಶದಿಂದ ಇದ್ದರೆ ಮಾತ್ರವೇ ಎಲ್ಲರೂ ಸಂತೋಶದಿಂದ ಇರಲು ಸಾಧ್ಯ, ಅವರು ಸದಾ ಸಂತೋಶವಾಗಿ ಇರಬೇಕು' ಎಂದು ಪರಮೇಶ್ವರ್ ಅವರು ಹೇಳಿದ್ದಾರೆ.
ಜನರು ವಿಶ್ವಾಸ ತೋರಲಿಲ್ಲವೆಂದು ನೊಂದು ಕುಮಾರಸ್ವಾಮಿ ಕಣ್ಣೀರು
ಕುಮಾರಸ್ವಾಮಿ ಅವರು ನಿನ್ನೆ ಜೆಡಿಎಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, 'ಮೈತ್ರಿ ಸರ್ಕಾರದಲ್ಲಿ ಎದುರಾದ ನೋವುಗಳನ್ನು ವಿಷಕಂಠನಂತೆ ಕುಡಿದಿದ್ದೇನೆ' ಎಂದು ಕಣ್ಣೀರು ಹಾಕಿದ್ದರು. ಇದು ಬಹಳಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಬೀದರ್
ಮಕ್ಕಳ
ಕಳ್ಳರ
ವದಂತಿ
ಬೀದರ್ನಲ್ಲಿ
ಮೊನ್ನೆ
ಮಕ್ಕಳ
ಕಳ್ಳರ
ವದಂತಿಯಿಂದಾಗಿ
ಒಂದು
ಸಾವಾಗಿರುವ
ಬಗ್ಗೆಯೂ
ಇದೇ
ಸಮಯದಲ್ಲಿ
ಪ್ರತಿಕ್ರಿಯಿಸಿರುವ
ಅವರು,
ಈ
ಮುಂಚೆ
ಬೀದರ್
ಹಾಗೂ
ಕಲಬುರಗಿಗಳಲ್ಲಿ
ಮಕ್ಕಳ
ಕಳ್ಳತನದ
ಆರೋಪಗಳು
ಬಂದಿದ್ದವು
ಹಾಗಾಗಿ
ಈ
ರೀತಿಯ
ಘಟನೆ
ಆಗಿದೆ.
ಪೊಲೀಸರು
ಇದರ
ಬಗ್ಗೆ
ತನಿಖೆ
ಮಾಡುತ್ತಿದ್ದಾರೆ
ಎಂದರು.