ಬಿಬಿಎಂಪಿಗೆ ಬೆಂಗಳೂರಿನವರೇ ಆಯುಕ್ತರು
ಬೆಂಗಳೂರು, ಏ. 20 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಜಿ. ಕುಮಾರ್ ನಾಯಕ್ ಅವರು ಸೋಮವಾರ ಅಧಿಕಾರವಹಿಸಿಕೊಂಡಿದ್ದಾರೆ. ಶನಿವಾರ ಕುಮಾರ್ ನಾಯಕ್ ಅವರನ್ನು ಸರ್ಕಾರ ಆಯುಕ್ತರಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.
ಶನಿವಾರ
ಬಿಬಿಎಂಪಿಯನ್ನು
ವಿಸರ್ಜನೆ
ಮಾಡಿದ್ದ
ಸರ್ಕಾರ
ಪಾಲಿಕೆ
ಆಯುಕ್ತರಾಗಿದ್ದ
ಎಂ.ಲಕ್ಷ್ಮೀನಾರಾಯಣ
ಅವರನ್ನು
ವರ್ಗಾವಣೆ
ಮಾಡಿತ್ತು.
ಜಿ.
ಕುಮಾರ್
ನಾಯಕ್
ಅವರನ್ನು
ನೂತನ
ಆಯುಕ್ತರನ್ನಾಗಿ
ನೇಮಕ
ಮಾಡಿತ್ತು.
[ಬಿಬಿಎಂಪಿ
ವಿಸರ್ಜನೆ
ಮಾಡಿ
ಸರ್ಕಾರದ
ಅಧಿಸೂಚನೆ]
ಸೋಮವಾರ ಬಿಬಿಎಂಪಿ ಕಚೇರಿಗೆ ಆಗಮಿಸಿದ ಕುಮಾರ್ ನಾಯಕ್ ಅವರು ಆಯುಕ್ತರಾಗಿ ಎಂ.ಲಕ್ಷ್ಮೀನಾರಾಯಣ ಅವರಿಂದ ಅಧಿಕಾರ ಸ್ವೀಕರಿಸಿದರು. ಲಕ್ಷ್ಮೀನಾರಾಯಣ ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆಯನ್ನು ಸರ್ಕಾರ ನೀಡಿಲ್ಲ. [ಬಿಬಿಎಂಪಿ ವಿಭಜನೆ : ವಿಶೇಷ ಅಧಿವೇಶನದ ಮುಖ್ಯಾಂಶಗಳು]
ಬಿಬಿಎಂಪಿ ಆಡಳಿತಾಧಿಕಾರಿಯಾಗಿ ಟಿ. ಎಂ. ವಿಜಯಭಾಸ್ಕರ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ವಿಸರ್ಜನೆಗೊಂಡ ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತ ಆರಂಭವಾಗಿದೆ. [ಬಿಬಿಎಂಪಿ ಚುನಾವಣೆ ಘೋಷಣೆಗೆ ತಡೆ]
ಬಿಬಿಎಂಪಿಯ 198 ಸದಸ್ಯರ ಆಡಳಿತ ಅವಧಿ ಏ.22ಕ್ಕೆ ಕೊನೆಗೊಳ್ಳುತ್ತಿತ್ತು. ಆದರೆ, ಪಾಲಿಕೆಯಲ್ಲಿ ನಡೆದ ಅವ್ಯವಹಾರ ನೆಪ ಹೇಳಿದ ಸರ್ಕಾರ ಏ. 18ರಂದು ಪಾಲಿಕೆಯನ್ನು ವಿಸರ್ಜಿಸಿ ಆದೇಶ ಹೊರಡಿಸಿತ್ತು. ಇದರಿಂದಾಗಿ ಪಾಲಿಕೆಗೆ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ.
ಬೆಂಗಳೂರಿನವರೇ ಆಯುಕ್ತರು : 1990ರ ಬ್ಯಾಚ್ನ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್ ಬೆಂಗಳೂರು ನಗರದವರು. ಮೈಸೂರಿನ ಶ್ರೀ ರಾಮಕೃಷ್ಣ ವಿದ್ಯಾಶಾಲಾ ಮತ್ತು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಅವರು ವ್ಯಾಸಂಗ ಮಾಡಿದ್ದಾರೆ. ಹುಣಸೂರು, ಕುಮುಟಾದಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸ ಮಾಡಿದ್ದಾರೆ. ಬೆಳಗಾವಿ ಜಿಲ್ಲಾ ಪಂಚಾಯಿತಿ ಸಿಇಓ ಆಗಿ, ರಾಯಚೂರು, ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.