ನೇಪಾಳದ ಪಶುಪತಿನಾಥನ ಸನ್ನಿಧಿಗೆ ಹೊರಟ ದೇವೇಗೌಡರು
Recommended Video
ಬೆಂಗಳೂರು, ಸೆಪ್ಟೆಂಬರ್ 6: ಮೂರುದಿನಗಳ ಹಿಂದಷ್ಟೇ ತಮ್ಮ ನಿವಾಸದಲ್ಲಿ ಕಾಶಿವಿಶ್ವನಾಥನ ಬೃಹತ್ ಭಾವಚಿತ್ರ ಅಳವಡಿಸಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರು ಇದೀಗ ಖುದ್ದಾಗಿ ಪಶುಪತಿನಾಥ ಮಂದಿರಕ್ಕೆ ತೆರಳಲು ಸಿದ್ಧರಾಗಿದ್ದಾರೆ.
ದೇವೇಗೌಡರು ಗುರುವಾರ ಸಂಜೆ ನವದೆಹಲಿಯಿಂದ ನೇಪಾಳ ರಾಜಧಾನಿ ಕಟ್ಮಂಡುವಿಗೆ ತೆರಳಲಿದ್ದು ಶುಕ್ರವಾರ ಪಶುಪತಿನಾಥ ಮಂದಿರಕ್ಕೆ ತೆರಳಲಿದ್ದಾರೆ. ಕುಟುಂಬ ಸಮೇತ ದರ್ಶನ ಪಡೆಯಲಿರುವ ಮಾಜಿ ಪ್ರಧಾನಿ ಶನಿವಾರದ ವೇಳೆಗೆ ಬೆಂಗಳೂರಿಗೆ ವಾಪಸ್ ಆಗುವ ನಿರೀಕ್ಷೆ ಇದೆ.
ದೇವೇಗೌಡರು ಮನೆಯಲ್ಲಿ ಯಾರ ಬೃಹತ್ ಭಾವಚಿತ್ರ ಅನಾವರಣ ಮಾಡಿದ್ರು?
ಅಪಾರ ದೈವಭಕ್ತರಾಗಿರುವ ದೇವೇಗೌಡರು ಇತ್ತೀಚಿನ ದಿನಗಳಲ್ಲಿ ರಾಜ್ಯದ ಹಲವು ದೇವಸ್ಥಾನಗಳಲ್ಲಿ ಹೋಮ ಹವನ ನಡೆಸಿರುವುದಲ್ಲದೇ ಅವರ ಪುತ್ರ ಎಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಆಂಧ್ರಪ್ರದೇಶದ ತಿರುಪತಿಗೆ ತೆರಳಿ ವೆಂಕಟೇಶ್ವರನ ದರ್ಶನವನ್ನು ಪಡೆದಿದ್ದಾರೆ.
ಇತ್ತೀಚೆಗಷ್ಟೆ ಕೇದಾರನಾಥ ದೇವಾಲಯಕ್ಕೆ ತೆರಳುವಂತೆ ನಿರ್ಧರಿಸಿದ್ದರು ಆದರೆ ಮಳೆಯಿಂದಾಗಿ ಮುಂದೂಡಿದ್ದರು, ಮನೆ ದೇವರು ಶೃಂಗೇರಿ ಶಾರದೆ ಹಾಗು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಹೋಮ-ಹವನ ನಡೆಸಿದರು.
ಶಿವ ಪುರಾಣ ಪ್ರಕಾರ ಯಾವ ರೀತಿಯ ಶಿವನ ಪೂಜೆಗೆ ಏನು ಫಲ?
ಇದೀಗ ದೇಶದ ಗಡಿಯಾಚೆ ಇರುವ ನೇಪಾಳಕ್ಕೂ ತೆರಳಿ ಪಶುಪತಿನಾಥನ ದರ್ಶನಕ್ಕೆ ಮುಂದಾಗಿದ್ದಾರೆ. ಮೂಲಗಳ ಪ್ರಕಾರ ದೆಹಲಿಯ ಜ್ಯೋತಿಷಿಯೊಬ್ಬರು ಪಶುಪತಿನಾಥನ ದರ್ಶನ ಪಡೆಯುವಂತೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ದೇವೇಗೌಡ ನೇಪಾಳಕ್ಕೆ ತೆರಳುತ್ತಿದ್ದಾರೆ ಎಂದು ತಿಳಿದುಬಂದಿದೆ.