ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಮಾನ್ಯರಂತೆ ಟ್ರಾಫಿಕ್‌ನಲ್ಲೇ ಪ್ರಯಾಣಿಸಿ ಜನಮೆಚ್ಚುಗೆ ಗಳಿಸಿದ ಸಿದ್ದರಾಮಯ್ಯ

|
Google Oneindia Kannada News

Recommended Video

ಬೆಂಗಳೂರಿನಲ್ಲಿ ಸಾಮಾನ್ಯರಂತೆ ಪ್ರಯಾಣ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ | Oneindia Kannada

ಬೆಂಗಳೂರು, ಜನವರಿ 2: ಟ್ರಾಫಿಕ್‌ನಲ್ಲೇ ಗಂಟೆಗಟ್ಟಲೆ ನಿಂತು ಜನ ಸಾಮಾನ್ಯರಂತೆ ಪ್ರಯಾಣಿಸಿದ ಸಿದ್ದರಾಮಯ್ಯ ಅವರ ಗುಣ ಇದೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ತುಮಕೂರಿನಿಂದ ಬೆಂಗಳೂರು ಕಡೆಗೆ ತೆರಳುವಾಗ ಮಾಜಿ ಸಿಎಂ ಸಿದ್ದರಾಮಯ್ಯ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಯಿತು ಆದರೂ ಟ್ರಾಫಿಕ್‌ನಲ್ಲೇ ಸಾಮಾನ್ಯರಂತೆ ತೆರಳಿದ್ದಾರೆ.

ಶಾಸಕರಿಗೆ ಬಿಜೆಪಿ ಆಮಿಷ: ಆಧಾರ ಇದೆ ಎಂದ ಸಿದ್ದರಾಮಯ್ಯಶಾಸಕರಿಗೆ ಬಿಜೆಪಿ ಆಮಿಷ: ಆಧಾರ ಇದೆ ಎಂದ ಸಿದ್ದರಾಮಯ್ಯ

ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರಿಗೆ ಸರ್ಕಾರ ಝೆಡ್ ಸೆಕ್ಯೂರಿಟಿ ಭದ್ರತೆ ನೀಡಿದ್ದರೂ ಮಂಗಳವಾರ ಯಾವುದೇ ಭದ್ರತೆ ಇಲ್ಲದೆ ರಸ್ತೆಗಿಳಿದಿದ್ದರು. ಅಧಿಕಾರವಿದ್ದರೆ ಸಾಕು ಝೀರೋ ಟ್ರಾಫಿಕ್ ಸೌಲಭ್ಯ ಬಳಸಿಕೊಂಡು ಓಡಾಡುವವರೇ ಹೆಚ್ಚು ಆದರೆ ಯಾವುದೇ ಸೆಕ್ಯುರಿಟಿಯು ಇಲ್ಲದೆ, ವಿಐಪಿ ಲೈನ್‌ನಲ್ಲಿ ಕೂಡ ಹೋಗದೆ ಸಾಮಾನ್ಯರಂತೆ ಟೋಲ್ ಕಟ್ಟಿ ಪ್ರಯಾಣಿಸಿದ್ದಾರೆ.

Former CM Siddaramaiah travelled like Common man

ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್ ಫುಟ್‌ಪಾತ್ ಮೇಲೆ ಬೈಕ್ ಸಂಚಾರಕ್ಕೆ ಬಿತ್ತು ಬ್ರೇಕ್

ಹೊಸ ವರ್ಷ ಮುಗಿಸಿಕೊಂಡು ಮಂಗಳವಾರ ಎಲ್ಲರೂ ಬೆಂಗಳೂರಿಗೆ ಆಗಮಿಸಿದ್ದಾರೆ ಹಾಗಾಗಿ ಟ್ರಾಫಿಕ್ ವಿಪರೀತವಾಗಿತ್ತು. ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದಿದ್ದವು, ನೆಲಮಂಗಲ ನವಯುಗ ಟೋಲ್ ಬಳಿ ಹೆಚ್ಚು ಟ್ರಾಫಿಕ್ ಜಾಮ್ ಉಂಟಾಗಿತ್ತು, ಹೀಗಾಗಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ಕೂಡ ಟ್ರಾಫಿಕ್‌ನಲ್ಲಿ ಸಿಲುಕಬೇಕಾಯಿತು. ಆದರೆ ಇದು ಜನರ ಮೆಚ್ಚುಗೆಗೆ ಪಾತ್ರವಾಯಿತು.

English summary
Former chief minister Siddaramaiah travelled like common man in Kunigal to Bengaluru road, During new year celebration this was happened.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X