ಅಕ್ರಮ ಗಣಿಗಾರಿಕೆ, ಸಂಸದ ಡಿಕೆ ಸುರೇಶ್ಗೆ ನೋಟೀಸ್
ರಾಮನಗರ, ಸೆ. 19 : ಕನಕಪುರ ತಾಲೂಕಿನ ಸಾತನೂರಿನ ಅರಣ್ಯದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರಿಗೆ ಅರಣ್ಯ ಇಲಾಖೆ ನೋಟೀಸ್ ಜಾರಿಗೊಳಿಸಿದ್ದು, ಸೆ.22ರಂದು ಖುದ್ದು ವಿಚಾರಣೆಗೆ ಹಾಜರಾಗಬೇಕು ಎಂದು ಸೂಚನೆ ನೀಡಿದೆ.
ಸಾತನೂರು
ಅರಣ್ಯ
ಪ್ರದೇಶದಲ್ಲಿ
ಕಾನೂನುಬಾಹಿರವಾಗಿ
ಕಲ್ಲು
ಗಣಿಗಾರಿಕೆ
ನಡೆಸಿ,
ಸರ್ಕಾರದ
ಬೊಕ್ಕಸಕ್ಕೆ
ಅಪಾರ
ನಷ್ಟ
ಉಂಟು
ಮಾಡಿದ್ದಾರೆ
ಎಂಬ
ಆರೋಪವಿದಾಗಿದ್ದು,
ಸಂಸದ
ಡಿ.ಕೆ.ಸುರೇಶ್
ಒಡೆತನದ
ಗ್ರಾನೈಟ್
ಕಂಪನಿ
ವಿರುದ್ಧ
ಕಳೆದ
ವಾರ
ಇಲಾಖೆ
ಅಧಿಕಾರಿಗಳು
ಎಫ್ಐಆರ್
ದಾಖಲಿಸಿದ್ದರು.
ಸದ್ಯ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ ಸುರೇಶ್, ಮೈಸೂರು ಮಿನರಲ್ಸ್ ಸೇರಿದಂತೆ 20 ಕಂಪನಿಗಳಿಗೆ ಅರಣ್ಯ ಇಲಾಖೆ ನೋಟೀಸ್ ಜಾರಿ ಮಾಡಿದೆ. ವಿಚಾರಣೆ ಖುದ್ದು ಹಾಜರಾಗದಿದ್ದರೆ, ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಹಿಂದೆ ಪ್ರಕರಣ ವಜಾಗೊಂಡಿತ್ತು : ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್ ವಿರುದ್ಧ ಈ ಹಿಂದೆಯೂ ಅಂದರೆ 2006-07ರಲ್ಲಿ ಕನಕಪುರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನು ಸುರೇಶ್ ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ಸಿಆರ್ಪಿಸಿ 155(2)ರ ಅಡಿಯಲ್ಲಿ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ 2007ರಲ್ಲಿ ಹೈಕೋರ್ಟ್ ಈ ಪ್ರಕರಣವನ್ನು ವಜಾಗೊಳಿಸಿತ್ತು.
ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಆರ್ಪಿಸಿ 155(2)ರ ಅಡಿಯಲ್ಲಿ ಅನುಮತಿ ಪಡೆದು ಮರು ತನಿಖೆ ನಡೆಸುತ್ತಿದ್ದಾರೆ. ಇದರ ಅನ್ವಯ ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಸುರೇಶ್ ಅವರಿಗೆ ನೋಟೀಸ್ ನೀಡಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ಸುಮಾರು 91 ಲಕ್ಷ ನಷ್ಟ, ಸುಮಾರು 73 ಲಕ್ಷದಷ್ಟು ರಾಜಧನ ನಷ್ಟವಾಗಿದೆ ಎಂಬ ಆರೋಪವಿದೆ.