ಬೆಂಗಳೂರು : ಮಾರತ್ ಹಳ್ಳಿ ಪಿಜ್ಜಾ ಹಟ್ನಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರು, ಮೇ 06 : ಬೆಂಗಳೂರಿನ ಮಾರತ್ ಹಳ್ಳಿಯ ಡೋಮಿನೋಸ್ ಪಿಜ್ಜಾ ಹಟ್ನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದೆ. ಅಗ್ನಿ ಶಾಮಕ ದಳದ ವಾಹನಗಳು ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.
ಶುಕ್ರವಾರ
ಮಧ್ಯಾಹ್ನ
ಪಿಜ್ಜಾ
ಹಟ್ನಲ್ಲಿ
ಸಿಲಿಂಡರ್
ಸ್ಫೋಟಗೊಂಡು
ಮೊದಲು
ಬೆಂಕಿ
ಹೊತ್ತಿಕೊಂಡಿದೆ.
ತಕ್ಷಣ
ಬೆಂಕಿ
ಇಡೀ
ಕಟ್ಟಡಕ್ಕೆ
ವ್ಯಾಪಿಸಿದೆ.
ಕಟ್ಟಡದ
ನೆಲ
ಮಹಡಿಯಲ್ಲಿದ್ದ
20ಕ್ಕೂ
ಬೈಕ್ಗಳು
ಬೆಂಕಿಗೆ
ಆಹುತಿಯಾಗಿವೆ.
ಬೆಂಕಿಯ
ಬಗ್ಗೆ
ತಿಳಿದ
ತಕ್ಷಣ
ಕಟ್ಟದಲ್ಲಿದ್ದವರು
ಹೊರಗೋಡಿ
ಬಂದಿದ್ದಾರೆ.[ಬೆಂಗಳೂರು:
ಗೋಪಾಲನ್
ಆರ್ಕೆಡ್
ನಲ್ಲಿ
ಅಗ್ನಿ
ಅವಘಡ]
ವಿಷಯ
ತಿಳಿಯುತ್ತಿದ್ದಂತೆ
ಸ್ಥಳಕ್ಕೆ
ಆಗಮಿಸಿದ
4
ಅಗ್ನಿ
ಶಾಮಕ
ದಳದ
ವಾಹನಗಳು
ಬೆಂಕಿ
ನಂದಿಸುವಲ್ಲಿ
ಯಶಸ್ವಿಯಾದವು.
ಎಚ್ಎಎಲ್
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.
ಅಗ್ನಿ
ಆಕಸ್ಮಿಕದಿಂದ
ಲಕ್ಷಾಂತರ
ರೂಪಾಯಿ
ನಷ್ಟ
ಉಂಟಾಗಿದೆ
ಎಂದು
ಅಂದಾಜಿಸಲಾಗಿದೆ.[ಹುಬ್ಬಳ್ಳಿಯಲ್ಲಿ
ತಪ್ಪಿದ
ಭಾರೀ
ಬೆಂಕಿ
ಅನಾಹುತ]
ಮೊದಲು ನೆಲ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಮೊದಲನೇ ಮಹಡಿಗೆ ಹಬ್ಬಿತು. ಇದರಿಂದಾಗಿ ಕಟ್ಟಡದ ತುಂಬಾ ದಟ್ಟ ಹೊಗೆ ಆವರಿಸಿತು. ಅಗ್ನಿ ಶಾಮಕದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದರು. ಅಗ್ನಿ ಆಕಸ್ಮಿಕದಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.