ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮತ್ತೆ ಭುಗಿಲೇಳಲಿದೆ ದೇಶಾದ್ಯಂತ ರೈತರ ಮುಷ್ಕರ

By Nayana
|
Google Oneindia Kannada News

Recommended Video

ಜೂನ್ 1ರಿಂದ 10ರವರೆಗೆ ಭಾರತದಾದ್ಯಂತ ರೈತರ ಮುಷ್ಕರ | Oneindia Kannada

ಬೆಂಗಳೂರು, ಮೇ 31: ದೇಶದ 130 ಕ್ಕೂ ಹೆಚ್ಚು ರೈತಪರ ಸಂಘಟನೆಗಳು ರಾಷ್ಟ್ರೀಯ ಕಿಸಾನ್ ಮಹಾಸಂಘದ ಬ್ಯಾನರ್‌ನಡಿ ಜೂನ್‌ 1ರಿಂದ ಭಾರಿ ಪ್ರಮಾಣದ ಹೋರಾಟವನ್ನು ದೇಶಾದ್ಯಂತ ಆರಂಭಿಸಲಿವೆ.

ಹತ್ತು ದಿನಗಳ ಕಾಲ ನಡೆಯಲಿರುವ ಈ ರೈತರ ಹೋರಾಟದಲ್ಲಿ 130 ಸಂಘಟನೆಗಳು ಭಾಗವಹಿಸುತ್ತಿದ್ದರೆ ಕಳೆದ ವರ್ಷ ಇದೇ ಸಂಘಟನೆಗಳ ಅಡಿಯಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ 193 ಸಂಘಟನೆಗಳು ಈ ಬಾರಿ ಹೋರಾಟದಿಂದ ದೂರ ಉಳಿದಿರುವುದು ರೈತರ ಹೋರಾಟದ ಯಶಸ್ಸು ಕುರಿತಂತೆ ಹಲವಾರು ಅನುಮಾನಗಳನ್ನು ಹುಟ್ಟಿಸಿದೆ.

ರೈತರ ಸಾಲಮನ್ನಾ ಕುರಿತ ಸಭೆಯಲ್ಲಿ ಏನೇನಾಯಿತು? ಇಲ್ಲಿದೆ ಪೂರ್ತಿ ವಿವರ ರೈತರ ಸಾಲಮನ್ನಾ ಕುರಿತ ಸಭೆಯಲ್ಲಿ ಏನೇನಾಯಿತು? ಇಲ್ಲಿದೆ ಪೂರ್ತಿ ವಿವರ

ಕಳೆದ ವರ್ಷ ಮಹಾರಾಷ್ಟ್ರದಿಂದ ಮಧ್ಯಪ್ರದೇಶದವರೆಗೆ ಹತ್ತು ದಿನಗಳ ಕಾಲ ಭಾರಿ ಪ್ರಮಾಣದ ರೈತರ ಹೋರಾಟ ದೇಶದಲ್ಲೇ ಸಂಚಲವನ್ನು ಸೃಷ್ಟಿಸಿತ್ತು. ಈ ಕುರಿತು ಹೇಳಿಕೆ ನೀಡಿರುವ ರಾಷ್ಟ್ರೀಯ ಕಿಸಾನ್ ಮಹಾಸಂಘದ ನಿಯೋಜಕ ಶಿವಕುಮಾರ್‌ ಕಕ್ಕಾಜೆ ಶರ್ಮಾ ಎರಡು ಬಗೆಯ ರೈತ ಸಂಘಟನೆಗಳಿವೆ.

Farmers across India are set to go on 10 day strike from June 1

ಒಂದು ಬಗೆಯ ಸಂಘಟನೆಗಳು ರೈತರ ಕಲ್ಯಾಣಕ್ಕಾಗಿ ಹೋರಾಡುತ್ತವೆ. ಇನ್ನು ಕೆಲವು ಸಂಘಟನೆಗಳು ರೈತರನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತದೆ. ಅಂತಹ ಸಂಘಟನೆಗಳು ಈ ಬಾರಿ ಹೋರಾಟದಿಂದ ದೂರ ಉಳಿದಿವೆ. 150 ಕ್ಕೂ ಹೆಚ್ಚು ಸಂಘಟನೆಗಳು ರೈತರ ಪರವಾಗಿ ರಾಜಕೀಯೇತರ ಸಂಘಟನೆಗಳಾಗಿ ಕೆಲಸ ಮಾಡುತ್ತಿದ್ದು, ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಸ್ವರಾಜ್ ಅಭಿಯಾನ ಸಂಸ್ಥಾಪಕ ಯೋಗೇಂದ್ರ ಯಾದವ್ ಈ ಕುರಿತು ಹೇಳಿಕೆ ನೀಡಿ ನಾವು ಕೇವಲ ಮಾಧ್ಯಮಗಳಿಂದ ರೈತರ ಮುಷ್ಕರದ ಬಗ್ಗೆ ತಿಳಿದುಕೊಂಡಿದ್ದೇವೆ ಈ ಬಗ್ಗೆ ಅಧಿಕೃತವಾದ ಯಾವುದೇ ಮಾಹಿತಿ ಇರಲಿಲ್ಲ, ಹೀಗಾಗಿ ನಾವು ಈ ಮುಷ್ಕರದಿಂದ ದೂರ ಉಳಿದಿದ್ದೇವೆ ರೈತರ ಪರವಾದ ಹೋರಾಟಕ್ಕೆ ನಾವು ಶುಭ ಕೋರುತ್ತೇವೆ ಎಂದಿದ್ದಾರೆ.

English summary
The Rashtriya Kisan Mahasangh with 130 organisations has called for a strike from June 1. But another key federation with 193 organisations is staying away.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X