ಸಿದ್ದರಾಮಯ್ಯ ಅವರ ಮೊದಲ ಟ್ವೀಟ್ ಗಳನ್ನು ಓದಿ
ಬೆಂಗಳೂರು, ಆಗಸ್ಟ್ 17 : 'ಆತ್ಮೀಯರೇ, ನನ್ನ ವೈಯಕ್ತಿಕ ಟ್ವಿಟರ್ ಖಾತೆ ಇದೀಗ ನಿಮ್ಮ ಮುಂದೆ ಅನಾವರಣಗೊಂಡಿದೆ. ನಿಮ್ಮ ಮುಂದೆ ಈ ಸಂದರ್ಭದಲ್ಲಿ ನನ್ನ ಭಾವನೆಗಳನ್ನು ಹಂಚಿಕೊಳ್ಳ ಬಯಸುತ್ತೇನೆ' ಎನ್ನುತ್ತಾ ಟ್ವಿಟ್ಟರ್ ಲೋಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ವೈಯಕ್ತಿಕ ಖಾತೆಯನ್ನು ಆರಂಭಿಸಿದ್ದಾರೆ.
'ನಾನೊಬ್ಬ ಕುಟುಂಬಸ್ಥ, ಸಾಮಾಜಿಕ ನ್ಯಾಯದಲ್ಲಿ ನಂಬಿಕೆಯಿದೆ ಎಂದಿದ್ದಾರೆ. ಟ್ವಿಟ್ಟರ್ ಖಾತೆ ಆರಂಭಿಸಿದ ಬಳಿಕ ತಮ್ಮ ಅಭಿಮಾನಿಗಳಿಗೆ ವಿಡಿಯೋ ಸಂದೇಶ ನೀಡಿದ್ದಾರೆ.
ಅಲ್ಲದೆ, ರಾಜ್ಯದ ಜನರೊಂದಿಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಹಾಗೂ ಸಾಮಾಜಿಕ ಪರಿವರ್ತನೆ ಹಾದಿಯಲ್ಲಿ ಜೊತೆ ಜೊತೆಯಾಗಿ ಸಾಗೋಣವೆಂದು ಸಿಎಂ ಕರೆ ನೀಡಿದ್ದಾರೆ.
ರಚನಾತ್ಮಕ ಚರ್ಚೆ, ಚಿಂತನೆಗಳು ಪ್ರಜಾಪ್ರಭುತ್ವದ ಜೀವಾಳ. ಚಿಂತನಶೀಲತೆಯನ್ನು ಉಳಿಸಿ, ಹಸಿ ಸುಳ್ಳುಗಳನ್ನು ಹತ್ತಿಕ್ಕಿದಾಗ ಮಾತ್ರ ಪ್ರಜಾಪ್ರಭುತ್ವ ಚಲನಶೀಲವಾಗುತ್ತದೆ.
ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಮಾತು-ಕೃತಿ, ನುಡಿ-ನಡೆಯಲ್ಲಿ ಒಮ್ಮತ ಕಾಯ್ದುಕೊಂಡಾಗ ಮಾತ್ರ ನಮ್ಮನ್ನು ಆರಿಸಿ ಕಳುಹಿಸಿದ ಜನತೆ ಹರಸುತ್ತಾರೆ. #ನುಡಿದಂತೆನಡೆಯೋಣ ಎಂದು ಬರೆದುಕೊಂಡಿದ್ದಾರೆ.
|
ಸಂವಿಧಾನದ ಆಶಯಗಳಿಗೆ ಬದ್ಧರಾಗಿ
ಸಂವಿಧಾನದ ಆಶಯಗಳಿಗೆ ಬದ್ಧರಾಗಿ ಮಾತು-ಕೃತಿ, ನುಡಿ-ನಡೆಯಲ್ಲಿ ಒಮ್ಮತ ಕಾಯ್ದುಕೊಂಡಾಗ ಮಾತ್ರ ನಮ್ಮನ್ನು ಆರಿಸಿ ಕಳುಹಿಸಿದ ಜನತೆ ಹರಸುತ್ತಾರೆ
|
ನನ್ನನ್ನು ಹಿಂಬಾಲಿಸಿ
ಆತ್ಮೀಯರೇ, ನನ್ನ ವೈಯಕ್ತಿಕ ಟ್ವಿಟರ್ ಖಾತೆ ಇದೀಗ ನಿಮ್ಮ ಮುಂದೆ ಅನಾವರಣಗೊಂಡಿದೆ. ನಿಮ್ಮ ಮುಂದೆ ಈ ಸಂದರ್ಭದಲ್ಲಿ ನನ್ನ ಭಾವನೆಗಳನ್ನು ಹಂಚಿಕೊಳ್ಳ ಬಯಸುತ್ತೇನೆ. ನನ್ನನ್ನು ಹಿಂಬಾಲಿಸಿ ಕರೆ ನೀಡಿದ್ದಾರೆ.
|
ಮುಖ್ಯಮಂತ್ರಿಗಳ ಖಾತೆ
@CMofKarnataka ಹೆಸರಿನ ಮುಖ್ಯಮಂತ್ರಿಗಳ ಅಧಿಕೃತ ಖಾತೆ ಚಾಲನೆಯಲ್ಲಿದ್ದು, ಇದು @siddaramaiah ಹೆಸರಿನ ಖಾತೆಯನ್ನು ವೈಯಕ್ತಿಕ ಸಂದೇಶಗಳನ್ನು ಹಾಕಲು ಬಳಸುತ್ತಾರೆ.
ಸಿದ್ದರಾಮಯ್ಯ ಸ್ವಗತ
About us ನಲ್ಲಿ ಮೊದಲಿಗೆ ಕನ್ನಡಿಗ ಎಂದು ಹಾಕಿಕೊಂಡಿದ್ದಾರೆ. ನಂತರ ಸಾಲಿನಲ್ಲಿ Believer in equity & social justice | Family man | Chief Minister of Karnataka ಎಂದು ಹಾಕಲಾಗಿದೆ. equality ಎನ್ನುವುದು equity ಎಂದಾಗಿದೆ.